ಕೇಂದ್ರ ಮಾಜಿ ಸಚಿವ ನಿಧನ: 10 ಗಂಟೆಗೆ ಸ್ವಗೃಹಕ್ಕೆ

378

ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಎಂ.ವಿ ರಾಜಶೇಖರನ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 92 ವರ್ಷದ ರಾಜಶೇಖರನ್ ಬಹು ಅಂಗಾಂಗ ಕಾಯಿಲೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು ಎಂದು ಅವರ ಪುತ್ರ ತಿಳಿಸಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಬಸವನಗುಡಿಯಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು ಎಂದು ತಿಳಿಸಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ತುಂಬಾ ಆತ್ಮೀಯರು, ಅವರ ಕುಟುಂಬಸ್ಥರು ಮಾತ್ರ ಇದರಲ್ಲಿ ಭಾಗಿಯಾಗಲಿದ್ದಾರೆ. 1928ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಜನಿಸಿದ್ರು.

ಸ್ವಾತಂತ್ರ್ಯ ಹೋರಾಟದ ಟೈಂನಲ್ಲಿ ಮೈಸೂರು ಚೆಲೋ ಚಳುವಳಯಲ್ಲಿ ಭಾಗವಹಿಸಿದ್ರು. ಮುಂದೆ ಕಾಂಗ್ರೆಸ್ ಸೇರಿದ್ರು. ಇಲ್ಲಿ ನಾನಾ ಹುದ್ದೆಗಳನ್ನ ನಿಭಾಯಿಸಿದ್ರು. ಶಾಸಕರಾದ್ರು. ರಾಜ್ಯಸಭಾ ಸದಸ್ಯರಾದ್ರು. ಯುಪಿಎ ಸರ್ಕಾರದಲ್ಲಿ ಯೋಜನಾ ಖಾತೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಜ್ಜನ ರಾಜಕಾರಣಿಯ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!