ಕಸಾಪ-ಪಾಟೀಲ ಗೆಳೆಯರ ಬಳಗದಿಂದ ಊಟೋಪಚಾರ

328

ಸಿಂದಗಿ: ಪಟ್ಟಣದಲ್ಲಿನ ಕರೋನಾ ವಾರಿಯರ್ಸ್ ಗೆ ಒಬ್ಬರಾದ್ಮೇಲೆ ಒಬ್ಬರು ಊಟೋಪಚಾರದ ವ್ಯವಸ್ಥೆ ಮಾಡುವ ಮೂಲಕ, ಒಂದಿಷ್ಟು ಅಳಿಲು ಸೇವೆ ಸಲ್ಲಿಸ್ತಿದ್ದಾರೆ. ಇಂದು ಕಲ್ಲೂರ ಪರಿವಾರದಿಂದ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಅಗತ್ಯ ಸೇವೆಯಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರತ ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪೌರಕಾರ್ಮಿಕರ ಸಿಬ್ಬಂದಿ ಹಾಗೂ ನಿರಾಶ್ರಿತರಿಗೆ ಬೆಳಿಗ್ಗೆ ಉಪಹಾರ ಮಧ್ಯಾಹ್ನ ಊಟದ ವ್ಯವಸ್ಥೆಯನ್ನ ಕಸಾಪ ಹಾಗೂ ಪಾಟೀಲ ಗೆಳೆಯರ ಬಳಗದಿಂದ ವ್ಯವಸ್ಥೆ ಮಾಡಿ ಮಾನವೀಯತೆ ಮೆರಯಲಾಗಿದೆ.

ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ  ಗೊಲ್ಲಾಳಪ್ಪಗೌಡ ಪಾಟೀಲ (ಮಾಗಣಗೇರಿ), NPS ನೌಕರ ಸಂಘದ ಅಧ್ಯಕ್ಷ ಶಿವಕುಮಾರ ಕಲ್ಲೂರ, ಪುರಸಭೆ ನೂತನ ಸದಸ್ಯರಾದ ಪ್ರತಿಭಾ ಶಿವಕುಮಾರ ಕಲ್ಲೂರ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!