ಬಂಗಾಳ, ಹರಿಯಾಣ ಬಳಿಕ ಪತ್ರಕರ್ತರಿಗೆ ವಿಮೆ ಘೋಷಿಸಿದ ಒಡಿಶಾ

285

ಪಟ್ನಾ: ಪಶ್ಚಿಮ ಬಂಗಾಳ ಹಾಗೂ ಹರಿಯಾಣ ಬಳಿಕ ಒಡಿಶಾ ಸರ್ಕಾರ ಪತ್ರಕರ್ತರಿಗೆ ಜೀವ ವಿಮೆ ಘೋಷಿಸಿದೆ. ಕರೋನಾ ವೈರಸ್ ವಿರುದ್ಧ ಹೋರಾಡ್ತಿರುವ ಪತ್ರಕರ್ತರಿಗೆ 15 ಲಕ್ಷ ರೂಪಾಯಿ ಜೀವ ವಿಮೆ ಘೋಷಿಸಿದ್ದಾರೆ.

ಈ ಹಿಂದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 10 ಲಕ್ಷ ರೂಪಾಯಿ, ಹರಿಯಾಣ ಸಿಎಂ ಮನೋಹರಲಾಲ ಖಟ್ಟರ್ 10 ಲಕ್ಷ ರೂಪಾಯಿ ಘೋಷಣೆ ಮಾಡಿದ್ರು. ಇದೀಗ ಒಡಿಶಾ ಸಿಎಂ ನವೀನ ಪಟ್ನಾಯಕ್ ಅವರು 15 ಲಕ್ಷ ರೂಪಾಯಿ ಜೀವ ವಿಮೆ ಘೋಷಣೆ ಮಾಡಿದ್ದಾರೆ.

ಇನ್ನು ಕರ್ನಾಟಕದಲ್ಲಿಯೂ ಪತ್ರಕರ್ತರಿಗೆ ಜೀವ ವಿಮೆ ಘೋಷಿಸಿರುವ ಬಗ್ಗೆ ಇದುವರೆಗೂ ಎಲ್ಲಿಯೂ ಮಾಹಿತಿ ಬಂದಿಲ್ಲ. ಮಹಾರಾಷ್ಟ್ರದಲ್ಲಿ 53 ಮಂದಿಗೆ, ತಮಿಳುನಾಡಿನಲ್ಲಿ, ಕರ್ನಾಟಕದಲ್ಲಿಯೂ ಪತ್ರಕರ್ತರಿಗೆ ಸೋಂಕು ಕಾಣಿಸಿಕೊಂಡಿದೆ. ಆದ್ರೆ, ರಾಜ್ಯ ಸರ್ಕಾರ ಇದುವರೆಗೂ ಕರೋನಾ ವಾರಿಯರ್ಸ್ ಎಂದು ಪತ್ರಕರ್ತರಿಗೆ ಹೇಳುತ್ತಿದೆ ವಿನಾಃ ಜಿವ ವಿಮೆ ಘೋಷಣೆ ಬಗ್ಗೆ ಮಾತ್ನಾಡ್ತಿಲ್ಲ.




Leave a Reply

Your email address will not be published. Required fields are marked *

error: Content is protected !!