ಕರೋನಾ ದೃಢಪಟ್ಟ ಕುಟುಂಬಸ್ಥರಿಗೆ ಬಹಿಷ್ಕಾರ! ವಿಜಯಪುರದಲ್ಲಿ ಇದೆಂಥಾ ಸ್ಥಿತಿ!

340

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕರೋನಾ ದೃಢಪಟ್ಟವರ ಕುಟುಂಬಸ್ಥರಿಗೆ ಸ್ಥಳೀಯರಿಂದ ಬಹಿಷ್ಕಾರ ಹಾಕಲಾಗಿರುವ ಆರೋಪ ಕೇಳಿ ಬಂದಿದೆ. ನಗರದ ಚಾಲುಕ್ಯ ನಗರದ ಶ್ರೀನಿಧಿ ಪಾಟೀಲ ಎಂಬುವವರು ಈ ಕುರಿತು ಟ್ವಿಟ್ ಮಾಡಿದ್ದಾರೆ.

ನನ್ನ ಗಂಡನಿಗೆ ಕರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಮನೆಗೆ ಕೆಲಸಕ್ಕೆ ಬರುವವರಿಗೆ, ಹಾಲು ಹಾಕುವವರಿಗೆ ಹಾಗೂ ಇತರೆ ಅಗತ್ಯ ವಸ್ತುಗಳನ್ನ ಬಡಾವಣೆಯ ಜನರು ಬಂದ್ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಲು ಹಾಕುವವನು ಗೇಟ್ ಮುಂದೆ ಇಟ್ಟು ಹೋಗ್ತಾನೆ. ಹಲವು ವರ್ಷಗಳಿಂದ ಚಪಾತಿ ಮಾಡಲು ಬರುವವಳು ಈಗ ಆಗುವುದಿಲ್ಲ ಅಂತಾಳೆ. ಗೇಟ್ ಮುಂದೆ ತಂದು ಇಟ್ಟು ಹೋಗ್ತಾಳೆ ಎಂದು ಟ್ವೀಟ್ ಮಾಡಿದ್ದಾರೆ.

ಇದ್ರಿಂದಾಗಿ ಮನೆಯಲ್ಲಿನ ಆರು ಜನರಿಗೆ ಮಾನಸಿಕ ಹಿಂಸೆ ಮತ್ತು ಪರದಾಟ ಶುರುವಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಪಿಎಂ ಇಂಡಿಯಾ, ಹೆಲ್ತ್ ಮಿನಿಸ್ಟರ್ ಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಇವರು ಹೇಳಿರುವುದು ನಿಜವಾಗಿದ್ರೆ ಇದು ಅತ್ಯಂತ ನೀಚ ಕೆಲಸ. ಇದನ್ನ ಯಾರೆ ಮಾಡಿದ್ರೂ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.




Leave a Reply

Your email address will not be published. Required fields are marked *

error: Content is protected !!