ಗುಮ್ಮಟನಗರಿಯಲ್ಲೊಬ್ಬ ಕರೋನಾ ಸೋಂಕಿತರ ಸೇವಕ

342

ಪ್ರಜಾಸ್ತ್ರ ವಿಶೇಷ

ವಿಜಯಪುರ: ಇದೀಗ ಎಲ್ಲಿ ನೋಡಿದ್ರೂ ಕರೋನಾ ಮಾತು. ಸ್ವಲ್ಪ ಶೀತ, ಕೆಮ್ಮು ಬಂದರೂ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಸೋಂಕಿತ ಹಾಗೂ ಸೋಂಕಿನಿದ ಗುಣಮುಖರಾಗಿದ್ದಾರೆ ಅಂದ್ರೂ, ಅವರನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗುಮ್ಮಟನಗರಿಯಲ್ಲೊಬ್ಬರು ಉಚಿತ ಸೇವೆ ಸಲ್ಲಿಸ್ತಿದ್ದಾರೆ.

ಕರೋನಾ ಸೋಂಕು ತಗುಲಿದೆ ಎಂದು ಗೊತ್ತಿದ್ರೂ ಅವರಿಗೆ ಆಸ್ಪತ್ರೆಗೆ ಸೇರ್ತಾರೆ. ಗುಣಮುಖರಾದ್ಮೇಲೆ ವಾಪಸ್ ಮನೆಗೆ ಬಿಡ್ತಾರೆ. ಜಸ್ಟ್ ನೀವೊಂದು ಫೋನ್ ಕಾಲ್ ಮಾಡಿದ್ರೆ ಸಾಕು ಈ ನಿಸ್ವಾರ್ಥ ಸೇವಕ ನಿಮ್ಮ ಮುಂದೆ ಹಾಜರು ಇರ್ತಾರೆ. ಅವರೆ ನಗರದ ನಿವಾಸಿ ಎಂ.ಬಿ ಮಾಣಿಕ ಎಂಬುವರು.

ಕೋವಿಡ್ 19 ಸೋಂಕಿಗೆ ಸ್ವತಃ ಮನೆಯವರು ಸಹ ಮುಟ್ಟಿಸಿಕೊಳ್ಳದೆ ಇರುವ ಪರಿಸ್ಥಿತಿಯಲ್ಲಿ, ಮಾಣಿಕ ಅವರು ಜೀವದ ಹಂಗು ತೊರೆದು ಸೇವೆ ಸಲ್ಲಿಸ್ತಿದ್ದಾರೆ. ಇವರ ಸೇವೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಂ.ಬಿ ಮಾಣಿಕ ಅವರು ಎಲ್ಲ ರೀತಿಯ ಸುರಕ್ಷತೆ ಕ್ರಮಗಳನ್ನ ತೆಗೆದುಕೊಂಡು ತಮ್ಮ ಸೇವೆ ಮುಂದುವರೆಸಲಿ. ಅವರಿಗೆ ಸರ್ಕಾರ ಸಕಲ ನೆರವು ನೀಡಬೇಕಿದೆ.




Leave a Reply

Your email address will not be published. Required fields are marked *

error: Content is protected !!