ಪ್ರಜಾಸ್ತ್ರ ಸುದ್ದಿ
ಕೊಪ್ಪಳ: ಕರೋನಾ ಸೋಂಕಿತರು ಆಕ್ಸಿಜನ್, ಬೆಡ್ ಸಿಗದೇ ಸಾಯುತ್ತಿಲ್ಲ. ಸ್ಮಾರ್ಟ್ ಫೋನ್ ನೋಡಿ ಭಯದಿಂದಲೇ ಸಾಯುತ್ತಿದ್ದಾರೆ ಎಂದು ಕನಕಗಿರಿ ಬಿಜೆಪಿ ಶಾಸಕ ಬಸವರಾಜ ಧಡೇಸುಗೂರ ಹೇಳಿರುವ ಮಾತು ಸಾಕಷ್ಟು ಸುದ್ದಿ ಮಾಡ್ತಿದೆ.
ಗಂಗಾವತಿಯ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಬಸವರಾಜ ಧಡೇಸುಗೂರ, ಸೋಂಕಿತರು ಸ್ಮಾರ್ಟ್ ಫೋನ್ ನೋಡಿಯೇ ಸಾಯುತ್ತಿದ್ದಾರೆ. ಅವರಿಗೆ ಸ್ಮಾರ್ಟ್ ಫೋನ್ ಕೊಡಬೇಡಿ. ಬೇಕಿದ್ರೆ ಬೇಸಿಕ್ ಮೊಬೈಲ್ ಕೊಡಿ ಎಂದು ವೈದ್ಯರಿಗೆ ಹೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.