ವಿವಾದಾತ್ಮಕ ಹೇಳಿಕೆಯಿಂದ ದೂರವಿರಿ: ಸಿಎಂ

296

ಬೆಂಗಳೂರು: ದಾವೋಸ್ ನಿಂದ ಬಂದ ಬಳಿಕ ಸಿಎಂ ಬಿ.ಎಸ್ ಯಡಿಯೂರಪ್ಪನವರಿಗೆ ಟೆನ್ಷನ್ ಶುರುವಾಗಿದೆ. ಸಂಪುಟ ವಿಸ್ತರಣೆಯ ಒತ್ತಡ ಜೋರಾಗಿದೆ. ಸಿಎಂ ಹೇಳಿದ ಮಾತು ಕೇಳಿ ಕೇಳಿ ಸಾಕಾಗಿ ಹೋದ ಶಾಸಕರು ಸಚಿವ ಸ್ಥಾನದ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರಲು ಹೇಳಿದ್ದಾರೆ. ಇದರ ಜೊತೆಗೆ ವಿವಾದಾತ್ಮಕ ಹೇಳಿಕೆ.

ಹೊನ್ನಳ್ಳಿ ಶಾಸಕ ರೇಣುಕಾಚಾರ್ಯ ಪದೆಪದೆ ವಿವಾದಾತ್ಮಕ ಹೇಳಿಕೆ ನೀಡ್ತಿದ್ದಾರೆ. ಮುಸ್ಲಿಂರನ್ನ ಗುರಿಯಾಗಿಸಿಕೊಂಡು ಶಾಸಕ ಹಾಗೂ ಸಿಎಂ ಕಾರ್ಯದರ್ಶಿಯಾಗಿರುವ ರೇಣುಕಾಚಾರ್ಯ ನೀಡ್ತಿರುವ ಮುಸ್ಲಿಂ ವಿರೋಧಿ ಹೇಳಿಕೆಗಳು ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸ್ತಿದೆ. ಹೀಗಾಗಿ ಸ್ವಪಕ್ಷದ ನಾಯಕರಿಗೆ, ಶಾಸಕರಿಗೆ ವಿವಾದಾತ್ಮಕ ಹೇಳಿಕೆಗಳನ್ನ ನೀಡ್ಬೇಡಿ ಅಂತಾ ಎಚ್ಚರಿಕೆ ನೀಡಿದ್ದಾರೆ.

ಇಷ್ಟು ದಿನ ಶಾಸಕ ಸೋಮಶೇಖರ ರೆಡ್ಡಿ ಮುಸ್ಲಿಂ ಸಮುದಾಯದ ವಿರುದ್ಧ ಹೇಳಿಕೆಗಳನ್ನ ನೀಡಿ ಆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದು ತಣ್ಣಗಾಗ್ತಿದ್ದಂತೆ ರೇಣುಕಾಚಾರ್ಯ ಶುರು ಮಾಡಿದ್ದಾನೆ. ಹೀಗಾಗಿ ಸಿಎಂ ಬಿಎಸ್ವೈ ಸ್ವಪಕ್ಷದವರಿಗೆ ವಿವಾದಾತ್ಮಕ ಹೇಳಿಕೆ ನೀಡಬೇಡಿ ಎಂದು ಖಡಕ್ ಸೂಚನೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!