ಬಿಎಸ್ವೈ-ಬಿಎಲ್ ಭೇಟಿ: ಯಾರು ಇನ್ ಯಾರು ಔಟ್?

301

ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷಕುಮಾರ ಅವರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಡಾಲರ್ಸ್ ಕಾಲೋನಿಯ ದವಳಗಿರಿ ನಿವಾಸದಲ್ಲಿ ಸಿಎಂ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದವರಿಗೆ ಸಚಿವ ಸ್ಥಾನ ನೀಡುವ ಸಂಬಂಧ ಭರ್ಜರಿಯಾಗಿ ಚರ್ಚೆ ನಡೆದಿದೆ. ಈ ವೇಳೆ 2 ಡಿಸಿಎಂ ಹುದ್ದೆಯಲ್ಲಿ ಒಬ್ಬರಿಗೂ ಕೊಕ್ ಹಾಗೂ ಇಬ್ಬರು ಸಚಿವರನ್ನ ಸಂಪುಟದಿಂದ ಕೈ ಬಿಡುವ ಕುರಿತು ಚರ್ಚೆ ನಡೆಸಲಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಸಚಿವ ಸಂಪುಟದ ಡೇಟ್ ಫಿಕ್ಸ್ ಆಗುತ್ತಾ? ಯಾರು ಇನ್ ಯಾರ ಔಟ್? ಯಾರಿಗೆ ಯಾವ ಸ್ಥಾನ ನೀಡಬೇಕು ಅನ್ನೋದರ ಚರ್ಚೆ ನಡೆದಿದೆ ಅಂತಾ ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!