ರಾಂಚಿ: ಜಾರ್ಖಂಡ್ ದೋಸ್ತಿ ಸರ್ಕಾರದಲ್ಲಿ ಒಡಕು ಮೂಡಿದ್ದು, ಪತನದಂಚಿನಲ್ಲಿದೆ. ಮುಖ್ಯಮಂತ್ರಿ ಹೇಮಂತ ಸೊರೆನ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನ ಜಾರ್ಖಂಡ್ ವಿಕಾಸ್ ಮೋರ್ಚಾ ಪ್ರಜಾತಾಂತ್ರಿಕ ಹಿಂಪಡೆದುಕೊಂಡಿದೆ. ಹೀಗಾಗಿ ಸೊರೆನ್ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾದ ಮುಖ್ಯಸ್ಥ ಹಾಗೂ ಸಿಎಂ ಹೇಮಂತ ಸೊರೆನ್ ಅವರಿಗೆ ಲೆಟರ್ ಬರೆದಿರುವ ಜೆವಿಎಂ ಅಧ್ಯಕ್ಷ ಬಾಬುಲಾಲ್ ಮುರಾಂಡಿ, ಕಾಂಗ್ರೆಸ್ ತಮ್ಮ ಪಕ್ಷವನ್ನ ಒಡೆಯಲು ನೋಡ್ತಿದೆ. ನಮ್ಮ ಇಬ್ಬರು ಶಾಸಕರು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದಾರೆ ಅಂತಾ ಹೇಳಿದ್ರು. ಇದರ ಮರುದಿನವೇ ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನ ವಾಪಸ್ ಪಡೆಯಲಾಗಿದೆ ಅಂತಾ ಘೋಷಿಸಲಾಗಿದೆ.