ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಹಾಗೂ ಪಂಡಿತ ರಾಜೀವ ತಾರಾನಾಥ ಅವರಿಗೆ ಬಸವಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಘೋಷಿಸಿದ್ದಾರೆ.
2019ನೇ ಸಾಲಿನ ಪ್ರಶಸ್ತಿ ಸರೋದ ವಾದಕ ಪಂಡಿತ ರಾಜೀವ ತಾರಾನಾಥ ಹಾಗೂ 2020ನೇ ಸಾಲಿನ ಪ್ರಶಸ್ತಿಯನ್ನ ಇಸ್ರೋ ಮಾಜಿ ಅಧ್ಯಕ್ಷ, ವಿಜ್ಞಾನಿ ಕಸ್ತೂರಿ ರಂಗನಾಥ ಅವರಿಗೆ ನೀಡಲಾಗಿದೆ. 5 ಲಕ್ಷ ರೂಪಾಯಿ ನಗದು ಹಾಗು ಪ್ರಶಸ್ತಿ ಪಲಕ ಒಳಗೊಂಡಿದ್ದು, ಲಾಕ್ ಡೌನ್ ಬಳಿಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.