ಪ್ರಜಾಸ್ತ್ರ ಸುದ್ದಿ
ಸಿಂದಗಿ: ಮೇಯಲು ಹೊಲಕ್ಕೆ ಹೋದ ಸಂದರ್ಭದಲ್ಲಿ ಹಸವೊಂದು ಬೃಹತ್ ಬಾವಿಗೆ ಬಿದ್ದ ಘಟನೆ ಸಿಂದಗಿಯ ತಾಂಡದಲ್ಲಿ ನಡೆದಿದೆ. ಶ್ರೀಶೈಲ ಅಂಬೋಜಿ ಹೊರಕೇರಿ ಎಂಬುವರ ಹೊಲದಲ್ಲಿ ಬಾವಿಯಲ್ಲಿ ಬುಧವಾರ ಮಧ್ಯಾಹ್ನ ಹಸು ಬಿದಿದೆ.
ಹಸು ಬಾವಿಗೆ ಬಿದ್ದಿರುವ ಬಗ್ಗೆ ಅಗ್ನಿ ಶಾಮಕ ಠಾಣೆಗೆ ತಿಳಿಸಿದೆ. ವಿಷಯ ತಿಳಿದ ತಕ್ಷಣೆ ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ, ಸಾಕಷ್ಟು ಹರಸಾಹಸ ಪಟ್ಟು ಹಸುವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಸು ರಕ್ಷಣಾ ಕಾರ್ಯದಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ಶಿವಕುಮಾರ ಬಾಗೇವಾಡಿ, ಸಿಬ್ಬಂದಿ ಮಚೇಂದ್ರ ಶಿಂಧೆ, ರಾವಿ ನಾಯಕ, ಶಾಂತಪ್ಪ ಬಿರಾದಾರ, ಶಿವಲಿಂಗಯ್ಯ ಮಠ ಹಾಗೂ ಮುತ್ತುರಾಜ ಹುಣಸಗಿ ಭಾಗವಹಿಸಿದ್ದರು.