ರನ್ನ ಸಕ್ಕರೆ ಕಾರ್ಖಾನೆ ಮರು ಪ್ರಾರಂಭಕ್ಕೆ ಒತ್ತಾಯ

201

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನಲ್ಲಿರುವ ರನ್ನ ರೈತ ಸಹಕಾರ ಸಕ್ಕರೆ ಕಾರ್ಖಾನೆ ಕಳೆದ ಒಂದೂವರೆ ವರ್ಷಗಳಿಂದ ಬಂದ್ ಆಗಿದೆ. ಅದನ್ನು ಮರು ಪ್ರಾರಂಭಿಸಿ ಹಾಗೂ ಅಲ್ಲಿ ಬಾಕಿ ಉಳಿದಿರುವ ಬಿಲ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸುರ್ವಣ ಸೌಧದ ಹತ್ತಿರ ಧರಣಿ ನಡೆಸಲಾಗುತ್ತಿದೆ. ಆದರೆ, ಇವರ ಹತ್ತಿರ ಯಾವೊಬ್ಬ ಸಚಿವರು ತಿರುಗಿಯೂ ನೋಡುತ್ತಿಲ್ಲ.

ಈ ಸಕ್ಕರೆ ಕರ್ಖಾನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ಬ್ಯಾಂಕಿನಲ್ಲಿ ಸಾಲ ಇರುವ ಕಾರಣಕ್ಕೆ ಒಂದಿಷ್ಟು ವಿವಾದ ಸಹ ನಡೆದುಕೊಂಡು ಬರುತ್ತಿದೆ. ಹೀಗಾಗಿ ಇದನ್ನು ಖಾಸಗಿಯವರು ಖರೀದಿ ಮಾಡಲು ನೋಡುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಆತಂರಿಕ ಚರ್ಚೆಗಳು ನಡೆಯುತ್ತಿವೆ. ಆದರೆ, ಇದನ್ನೇ ನಂಬಿರುವ ರೈತರು, ಕಾರ್ಮಿಕರು ಕಾರ್ಖಾನೆ ಪುನಃ ಪ್ರಾರಂಭಿಸಬೇಕು ಎಂದು ಸತತವಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಅದ್ಯಾವುದೂ ಫಲಪ್ರದವಾಗುತ್ತಿಲ್ಲ.




Leave a Reply

Your email address will not be published. Required fields are marked *

error: Content is protected !!