ಪ್ರಜಾಸ್ತ್ರ ಕ್ರೀಡಾ ಸುದ್ದಿ
ನವದೆಹಲಿ: ಟೀಂ ಇಂಡಿಯಾದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಡೆದಿರುವ ಮುಸುಕಿನ ಗುದ್ದಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನೂರಾರ್ ಠಾಕೂರ್ ಮಾತನಾಡಿದ್ದು, ಕ್ರೀಡೆಗಿಂತ ಯಾರೂ ದೊಡ್ಡವರಲ್ಲ ಎಂದಿದ್ದಾರೆ.
ಯಾವ ಆಟಗಾರರ ನಡುವೆ ಯಾವ ಸಂದರ್ಭದಲ್ಲಿ ಏನು ನಡೆಯುತ್ತಿದೆ ಎಂದು ಹೇಳಲು ಆಗಲ್ಲ. ಈ ಬಗ್ಗೆ ಸಂಬಂಧಪಟ್ಟ ಒಕ್ಕೂಟ, ಸಂಸ್ಥೆ ಮಾಹಿತಿ ನೀಡಿದೆ ಒಳ್ಳೆಯದು ಎನ್ನುವ ಮೂಲಕ ಕೊಹ್ಲಿ ಹಾಗೂ ಶರ್ಮಾ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಹೀಗೆ ಹೇಳಿದರು.
ಏಕದಿನ ಸರಣಿಗೆ ನಾನು ಲಭ್ಯವಿಲ್ಲವೆಂದು ಕೊಹ್ಲಿ, ಟೆಸ್ಟ್ ಸರಣಿಗೆ ನಾನು ಲಭ್ಯವಿಲ್ಲವೆಂದು ಶರ್ಮಾ ಹೇಳಿದ್ದಾರೆ. ಇದು ಮತ್ತಷ್ಟು ಗುದ್ದಾಟಕ್ಕೆ ಕಾರಣವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಮಹಮ್ಮದ್ ಅಝರುದ್ದೀನ್, ರೆಸ್ಟ್ ತೆಗೆದುಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ. ಆದರೆ, ಅದಕ್ಕೆ ಸಮಯಕ್ಕೆ ಒಳ್ಳೆಯದಾಗಿರಬೇಕು. ಈ ನಡೆ ಕೊಹ್ಲಿ, ಶರ್ಮಾ ನಡುವಿನ ಭಿನ್ನಾಭಿಪ್ರಾಯದ ಊಹಾಪೋಹಕ್ಕೆ ಪುಷ್ಟಿ ನೀಡುತ್ತೆ ಎಂದಿದ್ದಾರೆ.