ಮತ್ತೆ ಕನ್ನಡಿಗರ ಮನಸ್ಸು ಗೆದ್ದ ಡೇವಿಡ್ ವಾರ್ನರ್ ಡ್ಯಾನ್ಸ್

510

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ವಾರ್ನರ್, ಇತ್ತೀಚೆಗೆ ಭಾರತೀಯರಿಗೆ ತುಂಬಾ ಹತ್ತಿರವಾಗುತ್ತಿದ್ದಾರೆ. ಅದರಲ್ಲೂ ದಕ್ಷಿಣ ಭಾರತದವರಿಗಂತೂ ವಾರ್ನರ್ ಸಿಕ್ಕಾಪಟ್ಟೆ ಇಷ್ಟವಾಗಿದ್ದಾರೆ. ಕಾರಣ, ವಾರ್ನರ್ ಈ ಭಾಗದ ಚಿತ್ರಗಳ ಹಾಡಿಗೆ ಆಗಾಗ ಸ್ಟೆಪ್ಸ್ ಹಾಕುತ್ತಾರೆ.

ಎಬಿಡಿ ಹೇಗೆ ಕನ್ನಡಿಗರ ಹೃದಯದಲ್ಲಿ ಮನೆ ಮಾಡಿದ್ದಾರೋ ಹಾಗೇ ವಾರ್ನರ್ ಸಹ ಆ ಸ್ಥಾನಕ್ಕೆ ಬರುತ್ತಿದ್ದಾರೆ. ಇದೀಗ ತೆಲುಗು ನಟ ಅಲ್ಲು ಅರ್ಜನ್ ನಟನೆಯ ಪುಷ್ಪ ಚಿತ್ರದ ಶ್ರೀವಲ್ಲಿ ಹಾಡಿಗೆ ಸಣ್ಣದೊಂದು ಸ್ಟೆಪ್ಸ್ ಹಾಕಿದ್ದಾರೆ. ಆದರೆ, ಡೇವಿಡ್ ಆಯ್ಕೆ ಮಾಡಿಕೊಂಡಿದ್ದು ಕನ್ನಡ ಅವತರಣಿಕೆಯ ಹಾಡನ್ನು. ಈ ಮೂಲಕ ಮತ್ತೆ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

ಆಗಾ ಹೆಂಡ್ತಿ, ಮಕ್ಕಳೊಂದಿಗೆ ಭಾರತೀಯ ಭಾಷೆಯ ಹಾಡುಗಳಿಗೆ ಕುಣಿದು ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದರೊಂದಿಗೆ ಆಸ್ಟ್ರೇಲಿಯಾ ಆಟಗಾರ ಭಾರತೀಯದವರೆ ಅನ್ನೋವಷ್ಟರ ಮಟ್ಟಿಗೆ ಹತ್ತಿರವಾಗುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!