ಮೈಸೂರು: ದಸರಾ ಮುಗಿದು ಈಗಾಗ್ಲೇ ಮೂರು ತಿಂಗಳಾಗಿದೆ. ಆದ್ರೆ, ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ನಗದು ಬಹುಮಾನವನ್ನ ಕ್ರೀಡಾ ಇಲಾಖೆ ನೀಡಿಲ್ಲ. ಈ ಬಗ್ಗೆ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ದೂರು ಬಂದಿದೆ.
ದೂರು ಕೇಳಿದ್ರಿಂದ ಸಿಟ್ಟಾದ ಸಚಿವ ವಿ.ಸೋಮಣ್ಣ, ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಸುರೇಶ ಅವರನ್ನ ಅಮಾನತು ಮಾಡುವಂತೆ ವೇದಿಕೆಯಲ್ಲಿಯೇ ಸೂಚಿಸಿದ್ದಾರೆ. ಕ್ರೀಡಾ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸಚಿವರು ಸೂಚನೆ ನೀಡಿದ್ದಾರೆ.
ದಸರಾ ಕಾರ್ಯಕ್ರಮ ಮುಗಿದು ಮೂರು ತಿಂಗಳಾಗಿದೆ. ಇದರಲ್ಲಿ ಭಾಗವಹಿಸಿ ಗೆದ್ದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ನೀಡದೆ ಇರುವುದ ಗಮನಕ್ಕೆ ಬಂದಿದೆ. ಹೀಗಾಗಿ ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದ್ದಾರೆ.