ಡಿಕೆಶಿ ಪ್ರಕರಣ, ಸಚಿವ ಖರ್ಗೆ ಏನು ಹೇಳಿದರು?

217

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದನ್ನು ಈಗಿನ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದೆ. ಹೀಗಾಗಿ ಇದು ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಈ ಬಗ್ಗೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಅಡಿಯಲ್ಲಿ ಮಾಡಿರುವ ತೀರ್ಮಾನದ ಬಗ್ಗೆ ಇಷ್ಟೊಂದು ಪ್ರಶ್ನೆಗಳನ್ನು ಕೇಳುತ್ತೀರಿ. ಕಾನೂನು ಬಾಹಿರವಾಗಿ ಬಿಜೆಪಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಯಾಕೆ ಪ್ರಶ್ನಿಸುತ್ತಿಲ್ಲವೆಂದು ಮಾಧ್ಯಮದವರಿಗೆ ಪ್ರಶ್ನಿಸಿದ್ದಾರೆ. ಪಿಎಸ್ಐ ಹಗರಣ, ಗಂಗಾ ಕಲ್ಯಾಣ ಹಗರಣ ನಡೆದಿದ್ದು ಯಾಕೆ ಗೊತ್ತಿಲ್ಲವೇ? ಯತ್ನಾಳರು ಆಗ ಯಾಕೆ ಸುಮ್ನಿದ್ದರು. ಆಗಿನ ಅಡ್ವೆಕೇಟ್ ಜೆನರಲ್ ಅವರ ಸಂಬಂಧಿನಾ ಎಂದು ಕಿಡಿ ಕಾರಿದರು.

ಯಡಿಯೂರಪ್ಪ, ವಿಜಯೇಂದ್ರ, ಬಿಟ್ ಕಾಯಿನ್ ಹಗರಣವನ್ನು ಕೇಂದ್ರ ಸರ್ಕಾರ ಯಾಕೆ ಸಿಬಿಐಗೆ ಕೊಡುತ್ತಿಲ್ಲ. ನಾವು ಸಿಬಿಐಗೆ ಹೆದರುತ್ತಿಲ್ಲ. ನಾವು ದಾಖಲೆ ಸಮೇತ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಲಿ. ಡಿ.ಕೆ ಶಿವಕುಮಾರ್ ತಪ್ಪು ಮಾಡಿದ್ದಾರೋ ಮಾಡಿಲ್ಲವೋ ಎಂದು ನಾವು ಹೇಳುತ್ತಿಲ್ಲ. ಅದು ಕೋರ್ಟ್ ತೀರ್ಮಾನ ಮಾಡುತ್ತೆ. ಸಿಬಿಐ ವಿಚಾರಣೆಗೆ ನೀಡಿರುವ ಬಗ್ಗೆ ಮಾತ್ರ ನಾವು ಚರ್ಚೆ ಮಾಡುತ್ತಿದ್ದೇವೆ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.




Leave a Reply

Your email address will not be published. Required fields are marked *

error: Content is protected !!