ಬ್ಯುಸಿನೆಸ್ ಮ್ಯಾನ್.. ಪೊಲಿಟಿಷಿಯನ್ ಹೇಳಿದ್ದೇನು?

340

ಬೆಂಗಳೂರು: ಜಾಮೀನು ಮೇಲೆ ಹೊರ ಬಂದಿರುವ ಡಿಕೆ ಶಿವಕುಮಾರ ಮೊದಲ ಸುದ್ದಿಗೋಷ್ಠಿ ನಡೆಸಿದ್ರು. ವಿಮಾನ ನಿಲ್ದಾಣದಿಂದ ಅದ್ದೂರಿ ಮೆರವಣಿಗೆ ನಡೆಸಿದ ಡಿಕೆಶಿ ದೇವರ ದರ್ಶನ ಪಡೆದ ಬಳಿಕ, ಕೆಪಿಸಿಸಿ ಕಚೇರಿಗೆ ಎಂಟ್ರಿ ಕೊಟ್ಟು ಮಾಧ್ಯಮಗೋಷ್ಠಿ ನಡೆಸಿದ್ರು.

ನಾನು ಹುಚ್ಚಿನಿಂದ ಬ್ಯಸಿನೆಸ್ ಮ್ಯಾನ್. ಅನಿರೀಕ್ಷಿತವಾಗಿ ಶಿಕ್ಷಣ ಸಂಸ್ಥೆಗಳ ಒಡೆಯ. ಫ್ಯಾಷನ್ ಆಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟೆ ಅಂತಾ ಮಾಜಿ ಸಚಿವರು ಹೇಳಿದ್ರು. 29ರಂದು 9.30ಕ್ಕೆ ದೆಹಲಿ ಇಡಿ ಅಧಿಕಾರಿಗಳು ಸಮನ್ಸ್ ಕೊಟ್ರು. ಆ ಸಮನ್ಸ್ ಬೆಳಗ್ಗೆ 11 ಗಂಟೆಗೆ ಬರಬೇಕು ಎಂದಾಗಿತ್ತು. ನಾನು 11 ಗಂಟೆಗೆ ಬರಲು ಆಗೋದಿಲ್ಲ. ಲೇಟಾಗುತ್ತೆ ಎಂದು ಹೇಳಿ, 30ನೇ ತಾರೀಕು ಹೋದೆ.

ಕಾನೂನಿಗೆ ಬೆಲೆ ಕೊಟ್ಟು ಇಡಿ ಕಚೇರಿಗೆ ಭೇಟಿ ಕೊಟ್ಟೆ. ಅಲ್ಲಿಂದ ನಮ್ಮ ದೇವಾಲಯಕ್ಕೆ, ನಮ್ಮ ಪಕ್ಷದ ಕಚೇರಿಗೆ ಬಂದಿದ್ದೇನೆ. ಇದು ನನ್ನ ಕರ್ತವ್ಯ. ಮಾಧ್ಯಮದ ಸ್ನೇಹಿತರಿಗೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಜನರ ಮುಂದೆ ಬರಲಿದ್ದೇನೆ. ಅಲ್ಲಿಯವರೆಗೂ ನಾನು ಏನೂ ಮಾತ್ನಾಡುವುದಿಲ್ಲ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!