ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕಳೆದ ಎರಡು ದಿನಗಳ ಹಿಂದೆ 2 ಕೋಟಿ ರೂಪಾಯಿಷ್ಟು ಡ್ರಗ್ಸ್ ಸಿಕ್ಕಿದ್ದು, ಇದರ ಕಿಂಗ್ ಪಿನ್ ಅನಿಕಾಳೊಂದಿಗೆ ಸ್ಯಾಂಡಲ್ ವುಡ್ ಅಂಗಳದ ಕೆಲವರ ಹೆಸರು ಸುತ್ತಿಕೊಂಡಿದೆ. ಅದ್ಯಾರು ಅನ್ನೋದು ಯಾರಿಗೂ ಸ್ಪಷ್ಟವಾಗಿಲ್ಲ. ಇದರ ನಡುವೆ ಶನಿವಾರ ನಿರ್ದೇಶಕ ಇಂದ್ರಜೀತ ಲಂಕೇಶ, ಹೆಸರು ಹೇಳದೆ ಪರೋಕ್ಷವಾಗಿ ದಿವಂಗತ ಯುವ ನಟ ಚಿರಂಜೀವ ಸರ್ಜಾ ಅವರ ವಿಚಾರ ಪ್ರಸ್ತಾಪ ಮಾಡಿದ್ರು.
ಅಲ್ದೇ, ನಟಿಯೊಬ್ಬರ ಕಾರ್ ಆಕ್ಸಿಡೆಂಟ್ ನಡೆದಾಗ ಕಾರಿನಲ್ಲಿ ಡ್ರಗ್ಸ್ ಸಿಕ್ಕಿತ್ತು ಅಂತಾನು ಹೇಳಿದ್ರು. ಹೀಗಾಗಿ ನಾಡಿನಲ್ಲಿ ಇದೀಗ ಆ ನಟ ಹಾಗೂ ನಟಿ ಸೇರಿದಂತೆ ಅನೇಕರ ಬಗ್ಗೆ ಅನುಮಾನ ಮೂಡಿಸಿದೆ. ಇಂದ್ರಜೀತ ಅವರ ಹೇಳಿಕೆ ಸಂಬಂಧ, ಪತ್ನಿ ನಟಿ ಮೇಘನಾರಾಜ್ ಮಾತ್ನಾಡಿದ್ದು, ಚಿರು ಹೆಸರು ಡ್ರಗ್ಸ್ ವಿಚಾರದಲ್ಲಿ ಕೇಳಿ ತುಂಬಾ ಬೇಸರಾಯ್ತು ಎಂದಿದ್ದಾರೆ.
ಚಿರು ತೇಜೋವದೆ ಮಾಡಲು ಇಂದ್ರಜೀತ ಲಂಕೇಶ ಹೀಗೆ ಮಾಡ್ತಿದ್ದಾರೆ. ಅವರಿಗೆ ಇದ್ರಿಂದ ಏನು ಲಾಭ ಗೊತ್ತಿಲ್ಲ. ಇದಕ್ಕೆ ಉತ್ತರ ಕೊಡಲು ಅವರೆ ಇಲ್ಲವಲ್ಲ ಎಂದು ಕಣ್ಣೀರು ಹಾಕಿದ್ದು, ಮೀಡಿಯಾದಲ್ಲಿ ಚಿರು ಫೋಟೋ ನೋಡಿ ನೋವಾಗಿದೆ ಎಂದಿದ್ದಾರೆ.