ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಜನ್ಮದಿನ: ವಚನ ದಿನ ಆಚರಣೆ

417

ಪ್ರಜಾಸ್ತ್ರ ಸುದ್ದಿ

ಚಿಟಗುಪ್ಪ: ಬೀದರ ಜಿಲ್ಲೆಯ ಚಿಟಗುಪ್ಪ ನಗರದ ಕಲ್ಯಾಣ ಕಾಯಕ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜೀಗಳ ಜನ್ಮದಿನದ ನಿಮಿತ್ತ, ವಚನ ದಿನವನ್ನಾಗಿ ಆಚರಿಸಲಾಯ್ತು. ಚಿಟಗುಪ್ಪ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಡಿಯಲ್ಲಿ ಕಾರ್ಯಕ್ರಮ ನಡೆಸಲಾಯ್ತು.

ಸ್ವಾಗತ ಮತ್ತು ಪ್ರಸ್ತಾವಿಕವಾಗಿ ಪರಿಷತ್ತಿನ ಅಧ್ಯಕ್ಷರಾದ ಸಂಗಮೇಶ ಎನ್ ಜವಾದಿಯವರು ಮಾತನಾಡಿದ್ರು. ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಕುರಿತ ಭೀಮಶೆಟ್ಟಿ ವಡ್ಡನಕೇರವರು ಹಾಗೂ ವಚನ ಸಾಹಿತ್ಯ ಮತ್ತು ಪ್ರಜಾಪ್ರಭುತ್ವದ ಕುರಿತು ರಮೇಶ ಸಲಗರ ಅವರು ಉಪನ್ಯಾಸ ನೀಡಿದ್ರು.

ಈ ವೇಳೆ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯ್ತು. ಜೊತೆಗೆ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದವರಿಗೆ ಗೌರವಿಸಲಾಯ್ತು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯ್ತು. ತಿಪ್ಪಣ್ಣಾ ಶರ್ಮಾ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದ್ರು. ರಾಜಶೇಖರ ಉಪ್ಪಿನ ಸಂಚಾಲನೆ ನೆರವೇರಿಸಿದರು. ಮಲ್ಲಶೆಟ್ಟಿ ಸಮರ್ಪಣೆ ಮಾಡಿದರು.




Leave a Reply

Your email address will not be published. Required fields are marked *

error: Content is protected !!