2 ದಿನ ಕರುನಾಡ ಸಂಭ್ರಮ: ಅಪ್ಪು, ಚಿರು ಕಟೌಟ್ ಕಿಕ್

229

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ವಿದ್ಯಾಪೀಠ ಸರ್ಕಲ್ ಹತ್ತಿರ ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಕರುನಾಡ ಸಂಭ್ರಮ ನಡೆಸಲಾಗುತ್ತಿದೆ. ಡಿಸೆಂಬರ್ 10 ಹಾಗೂ 11ರಂದು ಎರಡು ದಿನಗಳ ಕಾಲ ಭರ್ಜರಿಯಾಗಿ ಸಂಭ್ರಮ ನಡೆಯಲಿದೆ.

ಈ ಸಂಭ್ರಮಕ್ಕಾಗಿ ಪವರ್ ಸ್ಟಾರ್, ಕರ್ನಾಟಕ ರತ್ನ ದಿ.ಡಾ.ಪುನೀತ್ ರಾಜ್ ಕುಮಾರ್ ಹಾಗೂ ಚಿರಂಜೀವಿ ಸರ್ಜಾ ಅವರ ಬೃಹತ್ ಕಟೌಟ್ ನಿಲ್ಲಿಸಲಾಗಿದೆ. ಗೆಲುವು ಕನ್ನಡ ಗೆಳೆಯರ ಸಮಿತಿ ವತಿಯಿಂದ ಕರುನಾಡ ಸಂಭ್ರಮ ನಡೆಯುತ್ತಿದೆ. ಇದು 12ನೇ ವರ್ಷದ ಕಾರ್ಯಕ್ರಮವಾಗಿದೆ. ವರುಣ್ ಸ್ಟುಡಿಯೋಸ್ ಹಾಗೂ ರಾಜ್ ಇವೆಂಟ್ಸ್ ಸೇರಿಕೊಂಡು ಸಂಭ್ರಮ ನಿರ್ವಹಣೆ ಮಾಡುತ್ತಿವೆ.

ಈ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಹಲವು ನಟ, ನಟಿಯರು, ಗಾಯಕ, ಗಾಯಕಿಯರು ಸೇರಿದಂತೆ ಬಹುದೊಡ್ಡ ತಾರಾಬಳಗವೇ ಸೇರಲಿದೆ. ಈ ಮೂಲಕ ಕನ್ನಡ ನಾಡಿನ ಕುರಿತು ಹಾಡಿ, ಕುಣಿದು ಸಂಭ್ರಮಿಸಲಿದೆ.




Leave a Reply

Your email address will not be published. Required fields are marked *

error: Content is protected !!