ಅಪ್ಪು

246

ಮುಂಡುಗೋಡದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೋಮಾ 2ನೇ ವರ್ಷದ ವಿದ್ಯಾರ್ಥಿ ವಿನೇಶ್ ಶಿವರಾಜ ಕಾಂಬಳೆ, ಪವರ್ ಸ್ಟಾರ್ ದಿವಂಗತ ಡಾ.ಪುನೀತ್ ರಾಜಕುಮಾರ್ ಅವರ ಕುರಿತು ಬರೆದ ಕವಿತೆ ಇಲ್ಲಿದೆ.

ಕೊಟ್ಟು ಹೋದೆ ನಗುವ

ಬಿಟ್ಟು ಹೋದೆ ಜಗವ

ಗೆದ್ದೆ ನೀ ಎಲ್ಲರ ಮನವ

ಅಪ್ಪು ನಿನೆಂದೂ ನಮ್ಮವ

ರಾಜಣ್ಣನ ಕಿರಿಯ ಪುತ್ರ ನೀನು

ಕರುನಾಡ ದೈವ ನೀನು

ಜಗವ ಬಿಟ್ಟ ಮೇಲೆ ಸ್ಫೂರ್ತಿಯಾದೆ

ಕಣ್ಣುದಾನ ಮಾಡಿ ದಿವ್ಯಜ್ಯೋತಿಯಾದೆ

ನಿನ್ನ ನೋಡಲು ಬಂತು ಜನಸಾಗರ

ಅಭಿಮಾನಿಗಳ ಮನದಲ್ಲಿ ನೀನು ಅಜರಾಮರ

ನಟನೆಗೆ ನೀನೊಬ್ಬನೇ ಸಾಹುಕಾರ

ನೀನೇ ನಮ್ಮ ಕರ್ನಾಟಕ ರತ್ನ ಡಾ.ಪುನೀತ ರಾಜಕುಮಾರ

ಓ ಕರುನಾಡ ಕೂಸೆ

ನಮ್ಮದೊಂದು ಆಸೆ

ಬಂದುಬಿಡು ಮತ್ತೊಮ್ಮೆ ಜಗಕೆ

ಇದುವೆ ನಮ್ಮೆಲ್ಲರ ಬಯಕೆ

ಅಗಲಿ ನೀನು ಆಯಿತು ಒಂದು ವರ್ಷ

ಆಗಲಿಲ್ಲ ಇನ್ನೂ ಆ ನೋವ ಮರೆಯಲು

ಬಾ ತೆರೆಯ ಮೇಲೆ ಇನ್ನೊಮ್ಮೆ ಮಿಂಚಲು

ಆ ಮುಗ್ದ ನಗುವ ಮತ್ತೊಮ್ಮೆ ಹಂಚಲು!!!

ವಿನೇಶ್ ಶಿವರಾಜ ಕಾಂಬಳೆ

TAG


Leave a Reply

Your email address will not be published. Required fields are marked *

error: Content is protected !!