ಹಾಸನದಲ್ಲಿ ಮುಂದುವರೆದ ಸರಣಿ ಕೊಲೆ

346

ಪ್ರಜಾಸ್ತ್ರ ಅಪರಾಧ ಸುದ್ದಿ

ಹಾಸನ: ಜಿಲ್ಲೆಯಲ್ಲಿ ಸರಣಿ ಕೊಲೆ ಮುಂದುವರೆದಿದ್ದು, ಕಳೆದ ರಾತ್ರಿ ವೃದ್ಧ ದಂಪತಿಯನ್ನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ದಿಂಬಿನಿಂದ ಉಸಿರುಗಟ್ಟಿಸಿ ವೃದ್ಧ ದಂಪತಿಯನ್ನ ತೋಟದ ಮನೆಯಲ್ಲಿ ಕೊಲೆ ಮಾಡಿದ ಘಟನೆ ಚೆನ್ನರಾಯಪಟ್ಟಣ ತಾಲೂಕಿನ ಆಲಗೊಂಡನಹಳ್ಳಿಯಲ್ಲಿ ನಡೆದಿದೆ.

71 ವರ್ಷದ ಮುರುಳೀಧರ ಹಾಗೂ 67 ವರ್ಷದ ಉಮಾದೇವಿ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. 80 ಎಕೆರೆ ಜಮೀನು ಇದೆ. ಮುರುಳೀಧರ ತಂದೆ ಸ್ವಾತಂತ್ರ್ಯಹೋರಾಟಗಾರರಾಗಿದ್ದ ಟೈಂನಲ್ಲಿ ಜಮೀನು ಬಳುವಳಿಯಾಗಿ ಬಂದಿತ್ತು.

ಬಿಎಸ್ಸಿ ಅರ್ಗಿಕಲ್ಚರ್ ಮಾಡಿದ್ದ ಮುರುಳೀಧರ ಕೃಷಿ ಮಾಡಿಕೊಂಡು ತೋಟದ ಮನೆ ಕಟ್ಟಿಕೊಂಡು ಅಲ್ಲಿಯೇ ವಾಸವಾಗಿದ್ರು. ಇತ್ತೀಚೆಗೆ ಕೆಲವು ಎಕೆರೆ ಜಮೀನು ಮಾರಾಟ ಮಾಡಿದ್ರು. ಹಣಕ್ಕಾಗಿ ಅಥವ ಆಸ್ತಿಗಾಗಿ ಕೊಲೆ ಮಾಡಿರಬಹುದು ಎನ್ನಲಾಗ್ತಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!