ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ ಲಂಕೇಶ, ಇತ್ತೀಚಿಗೆ ಸಾವನ್ನಪ್ಪಿದ ನಟನ ಮರಣೋತ್ತರ ಪರೀಕ್ಷೆ ನಡೆಸಬೇಕಿತ್ತು ಎಂದು ಹೇಳುವ ಮೂಲಕ, ದಿವಂಗತ ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ಮಾತ್ನಾಡಿದ್ರು.
ಇಂದ್ರಜಿತ ಹೇಳಿಕೆಯಿಂದ ಪತ್ನಿ ಮೇಘನಾ, ಮಾವ ಸುಂದರ ರಾಜ್ ಸೇರಿದಂತೆ ಸ್ಯಾಂಡಲ್ ವುಡ್ ನ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ರು. ಹೀಗಾಗಿ ಬಳಿಕ ಇಂದ್ರಿಜಿತ ಲಂಕೇಶ, ಸತ್ತವರ ಬಗ್ಗೆ ಮಾತ್ನಾಡುವುದು ಬೇಡ ಎಂದು ಹೇಳಿ ತಮ್ಮ ಮಾತನ್ನ ವಾಪಸ್ ಪಡೆಯುವುದಾಗಿ ಹೇಳಿದ್ರು.
ಈ ಇಡೀ ಘಟನೆಯಿಂದ ನೊಂದಿರುವ ಚಿರಂಜೀವಿ ಪತ್ನಿ ಮೇಘನಾರಾಜ್, ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಗರ್ಭಿಣಿಯಾಗಿರುವ ನಾನು ಮಾನಸಿಕ ತೊಳಲಾಟದಲ್ಲಿದ್ದೇನೆ. ಇಂದ್ರಜಿತ ಹೇಳಿಕೆಯಿಂದ ನನ್ನ ಕುಟುಂಬಕ್ಕೆ ನೋವಾಗಿದೆ. ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಫಿಲ್ಮ್ ಚೇಂಬರ್ ಮೊರೆ ಹೋಗಿದ್ದಾರೆ.