ಗಾಂಧಿನಗರ ಗಾಂಜಾನಗರವಾಗಿಲ್ಲ: ಹಿರಿಯ ನಟ ದೊಡ್ಡಣ್ಣ

292

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಸ್ಯಾಂಡಲ್ ವುಡ್ ದುನಿಯಾದಲ್ಲಿ ನಶೆಯ ಚರ್ಚೆ ನಡೆಯುತ್ತಿದೆ. ನಿರ್ದೇಶಕ ಇಂದ್ರಜಿತ ಲಂಕೇಶ ಹೇಳಿರುವ ಮಾತಿಗೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ ಸೇರಿ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ.

ಇಂದು ಹಿರಿಯ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರೊಂದಿಗೆ ಸಭೆ ನಡೆಸಲಾಯ್ತು. ಈ ವೇಳೆ ಮಾತ್ನಾಡಿದ ಹಿರಿಯ ನಟ ದೊಡ್ಡಣ್ಣ, ಇಂದ್ರಜಿತ್ ಹೇಳಿಕೆಯಿಂದ ಆಘಾತವಾಗಿದೆ. ಒಂದಿಬ್ಬರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗವನ್ನ ದೂರುವುದು ಸರಿಯಲ್ಲವೆಂದು ಹೇಳಿದ್ದಾರೆ.

ಇನ್ನು ಗಾಂಧಿನಗರ ಗಾಂಜಾ ನಗರವಾಗಿಲ್ಲ. ತಪ್ಪು ಮಾಡಿದವರಿಗೆ ಕೋರ್ಟ್ ಶಿಕ್ಷೆ ನೀಡುತ್ತೆ. ನಾವು ಸರ್ಕಾರಿ ನೌಕರಿ ಬಿಟ್ಟು ಚಿತ್ರರಂಗಕ್ಕೆ ಬಂದವರು. ನನ್ಗೆ ತುತ್ತಿನ ಚೀಲ ಚಿತ್ರರಂಗ ತುಂಬಿಸುತ್ತಿದೆ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!