ಚಂದನವನದಲ್ಲಿ ವಿವಾದವಾದರೆ ಸಂಬರಗಿ ಪ್ರತ್ಯಕ್ಷ!

468

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈಗ ಕನ್ನಡ ಚಿತ್ರರಂಗದ ವಿಚಾರ ಅಂದ್ರೆ ಡ್ರಗ್ಸ್ ಚರ್ಚೆ ಶುರುವಾಗುತ್ತೆ. ಅದಾಗ್ಲೇ ಕೆಲ ನಟಿಯರಿಗೆ ನೋಟಿಸ್, ಮನೆ ತಪಾಸಣೆ, ಡ್ರಗ್ಸ್ ಪೆಡ್ಲರ್ ಗಳ ವಿಚಾರಣೆ ನಡೆಯುತ್ತಿದೆ. ಇದರ ಜೊತೆಗೆ ನಟಿ ಸಂಜನಾ ಗರ್ಲಾನಿ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು ಸೇರಿದಂತೆ ಹಿರಿಯ ನಟರು ಕೆಂಡ ಕಾರುತ್ತಿರುವುದು ಪ್ರಶಾಂತ ಸಂಬರಗಿ ಎಂಬುವರ ಮೇಲೆ.

ಪ್ರಶಾಂತ ಸಂಬರಗಿ ಚಿತ್ರರಂಗಕ್ಕೆ ಸಂಬಂಧ ಇಲ್ಲವೇ ಇಲ್ಲ ಅಂತಾ ಸಿನಿರಂಗದ ಕೆಲವರ ಮಾತು. ನಾನು ಸಿನಿಮಾ ವಿತರಣೆ ಮಾಡಿದ್ದೇನೆ. ಎಫ್ಎಂಗಳಲ್ಲಿ ಕೆಲಸ ಮಾಡಿದ್ದೇನೆ. ಹೀರೋ ಆಗಲು ಬಂದವನು 5 ಕೋಟಿ ರೂಪಾಯಿ ಕಳೆದುಕೊಂಡಿದ್ದೇನೆ ಅಂತಾರೆ ಪ್ರಶಾಂತ ಸಂಬರಗಿ.

ಇವರ ಫೇಸ್ ಬುಕ್ ನಲ್ಲಿ ನೋಡಿದ್ರೆ ಸಿನಿಮಾ ವಿತರಕರು ಎಂದಾಗ್ಲಿ, ಎಫ್ಎಂ ಜೊತೆ ಕೆಲಸ ಮಾಡಿರುವುದಾಗಲಿ ಬರೆದಿಲ್ಲ. ಅದು ಬರೆಯಬೇಕು ಅಂತಾನೂ ಏನಿಲ್ಲ. ಅವರ ವೈಯಕ್ತಿಕ ವಿಚಾರ. ಬೆಳಸೋಣ ಕನ್ನಡ, ಮತ್ತೊಮ್ಮೆ ಮೋದಿ ಅನ್ನೋ ಎರಡು ಅಲ್ಬಂ ಸಾಂಗ್ ಮಾಡಿದ್ದಾರೆ. ಸ್ಟಾರ್ ನಟ, ನಟಿಯರು ಹಾಗೂ ರಾಜಕೀಯ ನಾಯಕರ ಜೊತೆಗಿರುವ ಸಾಕಷ್ಟು ಫೋಟೋಗಳು ಇಲ್ಲಿವೆ. ನಾನು ಬಿಜೆಪಿ ಕಾರ್ಯಕರ್ತನಲ್ಲ ಅನ್ನೋ ಸಂಬರಗಿ ಅವರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್, ಕಾಮೆಂಟ್ಸ್ ನೋಡಿದ್ರೆ ಏನು ಅನ್ನೋದು ಗೊತ್ತಾಗುತ್ತೆ.

ತಾವೊಬ್ಬ ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಎಂದು ಹೇಳಿಕೊಳ್ಳುವ ಸಂಬರಗಿ ಅವರು ಸ್ಯಾಂಡಲ್ ವುಡ್ ನಲ್ಲಿ ವಿವಾದ ನಡೆದಾಗೆಲ್ಲ ಕಾಣಿಸಿಕೊಳ್ತಾರೆ. ಮೀ ಟು ವಿವಾದ ಟೈಂನಲ್ಲಿ ನಟಿ ಶ್ರುತಿ ಹರಿಹರನ್ ವಿರುದ್ಧ ದಾಳಿ ನಡೆಸಿದ್ರು. ಈಗ ಡ್ರಗ್ಸ್ ವಿಚಾರ. ಚಾನೆಲ್ ವೊಂದರ ಪ್ರೋಮೋದಲ್ಲಿ ಆ್ಯಂಕರ್ ಆಗಿ ಕಾಣಿಸಿಕೊಳ್ತಾರೆ. ಇದರ ಜೊತೆಗೆ ಕಿತ್ತೂರ ರಾಣಿ ಚೆನ್ನಮ್ಮನವರ ಮರಿಮೊಮ್ಮಗ ಎಂದಿದ್ದಾರೆ ಅನ್ನೋದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗ್ತಿದೆ.

ಚಿತ್ರರಂಗದವರು ಇವರನ್ನ ಚಿತ್ರೋದ್ಯಮಿ ಅಲ್ಲ ಅಂತಾರೆ.. ಸಾಮಾಜಿಕ ಕಾರ್ಯಕರ್ತ ಎನ್ನುವ ಇವರ ಅಭಿಯಾನ, ಹೋರಾಟದ ಬಗ್ಗೆ ಬಹುತೇಕರಿಗೆ ಮಾಹಿತಿಯೇ ಇಲ್ಲ.. ಚೆನ್ನಮ್ಮನವರ ಮರಿ ಮೊಮ್ಮಗ ವಿಚಾರ ಪ್ರಸ್ತಾಪವಾಗ್ತಿದೆ. ಇದಕ್ಕೆ ಅವರು ಏನು ಸ್ಪಷ್ಟೀಕರಣ ಕೊಡ್ತಾರೆ ಕಾದು ನೋಡಬೇಕು. ಈ ಎಲ್ಲ ಗೊಂದಲದಿಂದಾಗಿ ಸಂಬರಗಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡ್ತಿದ್ದಾರೆ ಅನ್ನೋ ಆಕ್ರೋಶ ವ್ಯಕ್ತವಾಗಿದೆ. ಇದೇನೆ ಇರ್ಲಿ ಪ್ರಶಾಂತ ಸಂಬರಗಿ ಯಾರು? ಅನ್ನೋದಕ್ಕೆ ಉತ್ತರ ಬೇಕಿದೆ..




Leave a Reply

Your email address will not be published. Required fields are marked *

error: Content is protected !!