ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕರೋನಾ ಹಾವಳಿಯಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿ ದುಬೈನಲ್ಲಿ ಆಯೋಜಿಸಲಾಗಿದೆ. ಈಗಾಗ್ಲೇ ಕೆಲ ತಂಡಗಳ ಆಟಗಾರರು ದುಬೈಗೆ ತೆರಳಿದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಟೀಂ ಇಂದಿನಿಂದ ಅಭ್ಯಾಸ ಪಂದ್ಯ ಶುರು ಮಾಡಿದೆ. ಇದರ ನಡುವೆ ಸಿಎಸ್ ಕೆ ಟೀಂನಿಂದ ಸ್ಪೀನ್ ಬೌಲರ್ ಭಜ್ಜಿ ಹೊರ ಬಂದಿದ್ದಾರೆ.
ಕೆಲ ಕಾರಣಗಳಿಂದ ಸುರೇಶ ರೈನಾ ಹೊರ ಬಂದಿದ್ದಾರೆ. ಇದೆ ರೀತಿ ಹರ್ಭಜನ್ ಸಿಂಗ್ ಸಹ ಹೊರ ಬರುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಸ್ವತಃ ಭಜ್ಜಿ ಟ್ವೀಟ್ ಮೂಲಕ ತಾವು ಈ ಬಾರಿಯ ಐಪಿಎಲ್ ನಲ್ಲಿ ಆಡ್ತಿಲ್ಲವೆಂದು ಹೇಳಿದ್ದಾರೆ.
ವೈಯಕ್ತಿಕ ಕಾರಣದಿಂದ ಈ ಬಾರಿಯ ಐಪಿಎಲ್ ನಲ್ಲಿ ಆಡ್ತಿಲ್ಲ. ಈಗಿನ ಕಷ್ಟದ ಸಂದರ್ಭದಲ್ಲಿ ಒಂದಿಷ್ಟು ಖಾಸಗಿತನ ಬೇಕಾಗಿದೆ. ಹೀಗಾಗಿ ನಾನು ನನ್ನ ಕುಟುಂಬದ ಜೊತೆ ಕಾಲ ಕಳೆಯಬೇಕಿದೆ. ಸಿಎಸ್ ಕೆ ಆಡಳಿತ ಮಂಡಳಿ ಅದ್ಭುತ ಸಹಕಾರ ನೀಡಿದೆ. ತಂಡಕ್ಕೆ ನಾನು ಶುಭ ಕೋರುತ್ತೇನೆ ಎಂದಿದ್ದಾರೆ.