ಹೆಚ್ಡಿಕೆ ವಿರುದ್ಧ ರಾಕ್ ಲೈನ್ ಬಳಿಕ ದೊಡ್ಡಣ್ಣ ಆಕ್ರೋಶ

267

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೆಆರ್ ಎಸ್ ಡ್ಯಾಂ ಬಿರುಕು ವಿಚಾರಕ್ಕೆ ಸಂಸದೆ ಸುಮಲತಾ ಅಂಬರೀಶ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರ ನಡುವಿನ ಸಮರ ಮುಂದುವರೆದಿದೆ. ನಿರ್ಮಾಪಕ ರಾಕ್ ಲೈನ್ ವೆಂಟೇಶ ಬಳಿಕ ಹಿರಿಯ ನಟ ದೊಡ್ಡಣ್ಣ ಕಿಡಿ ಕಾರಿದ್ದಾರೆ.

ಅಂಬರೀಶ ಸ್ಮಾರಕ ಸಂಬಂಧ ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಅವರ ಬಳಿ ಹೋದ್ರೆ, ಅರ್ಧ ಗಂಟೆ ಕಾಯಿಸಿದ್ದಾರೆ. ಬಳಿಕ ಒಳಗೆ ಕರೆದಾಗ ಲೆಟರ್ ಕೊಟ್ಟರೆ, ಅಸಡ್ಡೆಯ ಮುಖ ಮಾಡಿ ಇವರೇನು ಸಾಧನೆ ಮಾಡಿದ್ದಾರೆ ಎಂದು ಸ್ಮಾರಕ ಮಾಡಬೇಕು ಎಂದು ಬಿಸಾಕಿದ್ರು ಅಂತಾ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಅಂಬರೀಶ ಅಭಿಮಾನಿಗಳು ಜೆಡಿಎಸ್ ನಾಯಕರ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದಾರಂತೆ. ಅಕ್ರಮ ಗಣಿಗಾರಿಕೆ ಅಂಬರೀಶ ಇದ್ದ ಕಾಲದಲ್ಲೇ ಆಗಿದೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಕ್ಯ ಆರೋಪಿಸಿದ್ದಾರೆ. ಅವರ ವಿರುದ್ಧ ಪ್ರತಿಭಟನೆ ಜೊತೆಗೆ ಗಣಿಗಾರಿಕೆ ಪ್ರಕರಣವನ್ನ ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಲು ಮುಂದಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!