ಆರ್ಥಿಕ ಕುಸಿತ: ಪ್ರಧಾನಿಗೆ ಶಿವಸೇನಾ ಹೇಳಿದ್ದೇನು?

354

ಮುಂಬೈ: ಕಳೆದ ಎರಡು ದಿನಗಳ ಹಿಂದೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು, ಆರ್ಥಿಕ ಕುಸಿತದ ಬಗ್ಗೆ ಎಚ್ಚರಿಕೆಯ ಮಾತುಗಳನ್ನ ಆಡಿದ್ರು. ಇದಕ್ಕೆ ಧ್ವನಿಗೂಡಿಸಿರುವ ಶಿವಸೇನಾ ತನ್ನ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಬಿಜೆಪಿ ಹಾಗೂ ಮೋದಿಗೆ ಸಲಹೆ ನೀಡಿದೆ.

ಆರ್ಥಿಕ ಪತನದ ಬಗ್ಗೆ ಮಾಜಿ ಪ್ರಧಾನಿ ಹೇಳಿದ ಮಾತುಗಳನ್ನ ಕೇಳಬೇಕು. ಇದು ವೈಯಕ್ತಿಕವಾದ ವಿಷಯವಲ್ಲ, ರಾಜಕೀಯವಾಗಿಯೂ ಇರುವುದಿಲ್ಲ. ದೇಶದ ಆರ್ಥಿಕ ದೃಷ್ಟಿಯಿಂದ ಮೋದಿ ಸರ್ಕಾರ ಇದನ್ನ ಕೇಳಿಸಿಕೊಳ್ಳಬೇಕು ಅಂತಾ ತಿಳಿಸಿದೆ. ಕಾಶ್ಮೀರ ಮತ್ತು ಆರ್ಥಿಕತೆ ಬೇರೆ ಬೇರೆ ವಿಚಾರಗಳು. ಆರ್ಥಿಕತೆ ಮಂದಗತಿಯಲ್ಲಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!