ನವದೆಹಲಿ: ಮಾಜಿ ಸಚಿವ ಡಿ.ಕೆ ಶಿವಕುಮಾರರನ್ನ ಬಂಧಿಸುವ ಹಿಂದೆ ದ್ವೇಷದ ರಾಜಕಾರಣವಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ದೇಶದ ಆರ್ಥಿಕತೆ ಪಾತಾಳಕ್ಕೆ ಇಳಿದಿದೆ. ಇದನ್ನ ಮರೆಮಾಚಲು ಡಿಕೆಶಿ ಬಂಧನದ ಹೈಡ್ರಾಮಾ ನಡೆಸಿದೆ ಎಂದು ಕಾಂಗ್ರೆಸ್ ಮುಖಂಡ ರಣದೀಪ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ದ್ವೇಷ ಸಾಧಿಸುವ ತಂತ್ರವಿದು. ಮಾಜಿ ವಿತ್ ಸಚಿವ ಪಿ.ಚಿದಂಬರಂ ಅವರನ್ನ ಬಂಧಿಸಿದ್ರು. ಇದೀಗ ಡಿ.ಕೆ ಶಿವಕುಮಾರವರನ್ನ ಬಂಧಿಸಲಾಗಿದೆ. ಜಿಡಿಪಿ ಶೇಕಡ 5ಕ್ಕೆ ಕುಸಿದಿದೆ. ಇದನ್ನ ಸರಿದಾರಿಗೆ ತರುವ ಬದಲು, ಆರ್ಥಿಕ ಹಿಂಜರಿಕೆಯನ್ನ ಮುಚ್ಚಲು ಕೇಂದ್ರ ಸರ್ಕಾರ ಈ ರೀತಿಯ ಬಂಧನದ ಹೈಡ್ರಾಮಾ ಮಾಡ್ತಿದೆ ಎಂದು ಸುರ್ಜೆವಾಲಾ ಕಿಡಿ ಕಾರಿದ್ದಾರೆ.