ಠಾಕ್ರೆ ಹೆಂಡ್ತಿನೂ ಓಡಿ ಹೋಗುತ್ತಾಳೆ ಎಂದು ನಾಲಿಗೆ ಹರಿಬಿಟ್ಟ ಈಶ್ವರಪ್ಪ

322

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಹಿಂದೂಗಳನ್ನು ಅವಮಾನಿಸುವವರನ್ನು ಗುಂಡಿಕ್ಕಿ ಎಂದು ಪ್ರಚೋದಾನತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಮಹಾರಾಷ್ಟ್ರದ ಮಾಜಿ ಸಿಎಂ ಉದ್ದವ್ ಠಾಕ್ರೆ ಹಾಗೂ ಅವರ ಹೆಂಡ್ತಿ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಈಶ್ವರಪ್ಪ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಮಹಾರಾಷ್ಟ್ರ ರಾಜಕೀಯ ವಿದ್ಯಾಮನದ ಕುರಿತು ಮಾತನಾಡಿದ ಈಶ್ವರಪ್ಪ, ಸಿಎಂ ಸ್ಥಾನಕ್ಕಾಗಿ ಬಾಳಸಾಹೇಬ್ ಠಾಕ್ರೆ ಮಗ ಉದ್ದವ್ ಹಿಂದುತ್ವವನ್ನೇ ಮಾರಾಟಕ್ಕೆ ಇಟ್ಟಿದ್ದಾರೆ. ಈಗ ಶಿವಸೇನೆ ಶಾಸಕರನ್ನು ಹೈಜಾಕ್ ಮಾಡಲಾಗಿದೆ ಎನ್ನುತ್ತಿದ್ದಾರೆ. ಶಾಸಕರಷ್ಟೇ ಅಲ್ಲ ನಿನ್ನ ಹೆಂಡ್ತಿಯನ್ನೂ ಕಂಟ್ರೋಲ್ ಮಾಡಲು ಆಗದಿದ್ದರೆ ಓಡಿಹೋಗುತ್ತಾಳೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೀಗೆ ಪದೆಪದೆ ಹಿಂಸೆಗೆ ಪ್ರಚೋದಿಸುವುದು, ಗುಂಡಿಕ್ಕಿ ಎನ್ನುವ ಮೂಲಕ ಹತ್ಯೆಗೆ ಪ್ರಚೋದಿಸುವುದು, ಹೆಣ್ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರೂ ಬಿಜೆಪಿ ಹೈಕಮಾಂಡ್ ಯಾವುದೇ ಕ್ರಮ ತೆಗೆದುಕೊಳ್ಳದೆ ಇರೋದು ದುರಂತವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!