ಸಿಡಿಲು ಬಡಿದು ರೈತ ಸಾವು ಇಬ್ಬರಿಗೆ ಗಾಯ

324

ಮಂಡ್ಯ: ಶೀಳನೆರೆ ಹೋಬಳಿಯ ಶಿವಪುರ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ರೈತ ಮೃತಪಟ್ಟಿರುವ ಘಟನೆ ನಡೆದಿದೆ. ಶಿವಪುರ ಗ್ರಾಮದ 60 ವರ್ಷದ ಪಾಪಣ್ಣ ಮೃತ ರೈತರಾಗಿದ್ದಾರೆ. 

ಭಾನುವಾರ ರಾತ್ರಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಸುಮಾರು 9 ಗಂಟೆಯ ಸಮಯದಲ್ಲಿ ಬಡಿದ ಸಿಡಿಲಿಗೆ ಪಾಪಣ್ಣ ಅವರು ಮೃತಪಟ್ಟಿದ್ದಾರೆ. ಅದೇ ಮನೆಯಲ್ಲಿದ್ದ  40 ವರ್ಷದ ನಾಗರಾಜು ಹಾಗೂ ಮೊಮ್ಮಗಳು 7 ವರ್ಷದ ಶ್ರೇಯಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳನ್ನ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು‌ ಮಾಡಲಾಗಿದೆ. ಘಟನೆ ಕುರಿತು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!