ಶುಕ್ರವಾರ ಬಂದ್ ಇರಲ್ಲಂದ ರೈತ ಸಂಘ

267

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರೈತ ವಿರೋಧಿ ಕಾಯ್ದೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ರೈತ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ವು. ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನ ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ಹೇಳಲಾಗಿತ್ತು. ಇದೀಗ ಬಂದ್ ನಿಂದ ರೈತ ಸಂಘ ಹಿಂದೆ ಸರೆದಿದೆ.

ಲಾಕ್ ಡೌನ್ ನಿಂದ ಈಗಾಗ್ಲೇ ಜನರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಹೀಗಿರುವಾಗ ಸಧ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಬಂದ್ ಬೇಕಾ ಅನ್ನೋ ಪ್ರಶ್ನೆಯನ್ನ ಪ್ರಜಾಸ್ತ್ರ ಕೇಳಿತ್ತು. ಕರೋನಾ ಲಾಕ್ ಡೌನ್ ನಿಂದ ಜನರು ಈಗ ಒಂದಿಷ್ಟು ಹೊರ ಬರುತ್ತಿದ್ದು, ಅಷ್ಟರಲ್ಲಿ ಬಂದ್ ಅನ್ನೋದು ಸೂಕ್ತವಲ್ಲ. ಜನರು ಎಷ್ಟು ಸ್ಪಂದಿಸುತ್ತಾರೆ ಅನ್ನೋದು ಮುಖ್ಯವಾಗುತ್ತೆ ಎಂದು ಹೇಳಲಾಗಿತ್ತು.

ಇದೀಗ ಈ ಬಗ್ಗೆ ಮಾತ್ನಾಡಿರುವ ರೈತ ಸಂಘಗಳ ಮುಖಂಡರಾದ ಕುರಬೂರು ಶಾಂತಕುಮಾರ, ಕೋಡಿಹಳ್ಳಿ ಚಂದ್ರಶೇಖರ, ಶುಕ್ರವಾರ ಬಂದ್ ಇರುವುದಿಲ್ಲ. ಇದರ ಬದಲು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಜೈಲ್ ಬರೋ ಚಳವಳಿ ನಡೆಸಲಾಗುತ್ತೆ ಎಂದಿದ್ದಾರೆ. ಜನರು ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟ ಎದುರಿಸಿದ್ದಾರೆ. ಹೀಗಾಗಿ ಪ್ರತಿಭಟನೆಗಳ ಮೂಲ ಎಚ್ಚರಿಕೆ ನೀಡಲಾಗುತ್ತೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!