ಸಾಲದ ಕುಣಿಕೆಗೆ ಕೊರಳೊಡ್ಡಿದ ಗಣಿಹಾರ ಗ್ರಾಮದ ರೈತ

273

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಾಲ ತೀರಿಸಲಾಗದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗಣಿಹಾರ ಗ್ರಾಮದಲ್ಲಿ ನಡೆದಿದೆ. 35 ವರ್ಷದ ಗಿರಿಮಲ್ಲಪ್ಪ ಕುಂಬಾರ ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ತಿಳಿದು ಬಂದಿದೆ.

ಎರಡು ಎಕರೆ ಜಮೀನು ಹೊಂದಿರುವ ರೈತ ಗಿರಿಮಲ್ಲಪ್ಪ ಕುಂಬಾರ, ಅತಿಯಾದ ಮಳೆಯಿಂದಾಗಿ ಬೆಳೆಯ ಫಸಲು ಕೈಕೊಟ್ಟಿದೆ. ಅಲ್ದೇ, ಬೆಳೆಗಾಗಿ ಸುಮಾರು 3 ಲಕ್ಷ ಕೈಸಾಲ ಸೇರಿದಂತೆ ನಾಲ್ಕೈದು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದನಂತೆ. ಇದನ್ನ ತೀರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ.

ತೋಟದ ಮನೆಯಲಿ ನೇಣು ಬಿಗಿದುಕೊಂಡು ಗಿರಿಮಲ್ಲಪ್ಪ ಕುಂಬಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಮೃತನ ತಂದೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!