ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಅಂಗಳದಲ್ಲಿನ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜೀವರಾಜ ಆಳ್ವಾ ಅವರ ಪುತ್ರ ಆದಿತ್ಯ ಆಳ್ವಾ ಬಂಧನವಾಗಿದೆ. ಇದರೊಂದಿಗೆ ಈ ಕೇಸಿನ 6ನೇ ಆರೋಪಿಯ ಬಂಧನವಾಗಿದೆ.
ಸೋಮವಾರ ತಡರಾತ್ರಿ ಚೆನ್ನೈನಲ್ಲಿ ಆದಿತ್ಯ ಆಳ್ವಾನನ್ನ ಅರೆಸ್ಟ್ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಆಳ್ವಾಗೆ ಸಂಬಂಧಿಸಿದ ರೆಸಾರ್ಟ್ ನಲ್ಲಿ ಭರ್ಜರಿ ಪಾರ್ಟಿಗಳನ್ನ ಆಯೋಜಿಸಲಾಗ್ತಿತ್ತು. ಅಲ್ಲಿ ಡ್ರಗ್ಸ್ ವ್ಯವಹಾರ ನಡೆಯುತಿತ್ತು ಎಂದು ತಿಳಿದು ಬಂದಿದೆ.
ಈ ಸಂಬಂಧ ಕಳೆದ 4 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆದಿತ್ಯ ಆಳ್ವಾ ಕೊನೆಗೂ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ತನಿಖೆ ನಡೆಯುತ್ತಿದೆ. ಇವನು ಸತ್ಯ ಬಾಯಿ ಬಿಟ್ಟರೆ ಸ್ಯಾಂಡಲ್ ವುಡ್ ದುನಿಯಾದ ಮತ್ತಷ್ಟು ಸ್ಟಾರ್ ನಟ, ನಟಿಯರ ಹೆಸರು ಹೊರ ಬರುವ ಸಾಧ್ಯತೆಯಿದೆ. ಇನ್ನು ಆದಿತ್ಯ ಆಳ್ವಾ ಸಹೋದರಿಯನ್ನ ಬಾಲಿವುಡ್ ನಟ ವಿವೇಕ ಓಬಿರಾಯ್ ಗೆ ಕೊಟ್ಟು ಮದುವೆ ಮಾಡಲಾಗಿದೆ. ಈ ಎಲ್ಲ ಕಾರಣಗಳಿಂದ ಈತನ ಬಂಧನ ತುಂಬಾ ಮಹತ್ವ ಪಡೆದುಕೊಂಡಿದೆ.