ಮಂಡ್ಯ: ನಾಲ್ಕು ಮಂದಿ ಪತ್ರಕರ್ತರ ಮೇಲೆ ಜೆಡಿಎಸ್ ಎಂಎಲ್ ಸಿ ಎಫ್ಐಆರ್ ದಾಖಲಿಸಿದ್ದಾರೆ. ಖಾಸಗಿ ವಾಹಿನಿಯ ವರದಿಗಾರರು ಹಾಗೂ ಕ್ಯಾಮೆರಾಮನ್ ಗಳ ಮೇಲೆ ಎಂಎಲ್ ಸಿ ಕೆ.ಟಿ ಶ್ರೀಕಂಠೇಗೌಡ ದೂರು ದಾಖಲಿಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ನಗರದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗರ ಕರೋನಾ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಇದಕ್ಕೆ ವಿರೋಧಿಸಿದ್ದ ಎಂಎಲ್ ಸಿ ಹಾಗೂ ಪುತ್ರ ಹಲ್ಲೆ ಸಹ ಮಾಡಿದ್ರು. ಆಗ ಪುತ್ರನನ್ನ ಪೊಲೀಸ್ರು ವಶಕ್ಕೆ ಪಡೆದು ಜಾಮೀನು ನೀಡಿದ್ರು.
ಘಟನೆ ನಡೆದು ನಾಲ್ಕು ದಿನಗಳ ಬಳಿಕ ತನ್ನ ಪ್ರಭಾವ ಬಳಸಿಕೊಂಡು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 704, 321, 323 ಅನ್ವಯ ಎಫ್ಐಆರ್ ದಾಖಲಿಸಿದ್ದಾರೆ. ಇದೀಗ ಪೊಲೀಸರ ಮೇಲೂ ಅನುಮಾನ ವ್ಯಕ್ತವಾಗಿದೆ.