ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ನಿಡಗುಂದಿ ಹತ್ತಿರದ ಬಸವನಬಾಗೇವಾಡಿ ಕ್ರಾಸ್ ಸಮೀಪವಿರುವ ಪ್ಲಾಸ್ಟಿಕ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಇಬ್ಬರು ಸಜೀವ ದಹನವಾದ ಘಟನೆ ನಡೆದಿದೆ. ಅಂಗಡಿಯಲ್ಲಿ ಮಲಗಿದ್ದ ಇಬ್ಬರು ಸಹಜೀವ ದಹನವಾಗಿದ್ದಾರೆ.
ಅಶೋಕ ದೇಸ್ನೋಯಿ(25) ಹಾಗೂ ಲಿಂಬರಾಮ ದೇಸ್ನೋಯಿ(35) ಮೃತ ವ್ಯಕ್ತಿಗಳೆಂದು ತಿಳಿದು ಬಂದಿದೆ. ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಅನಾಹುತಕ್ಕೆ ಕಾರಣ ಏನು ಅನ್ನೋದರ ತನಿಖೆ ನಡೆದಿದೆ.