ಪ್ರಜಾಸ್ತ್ರ ಸುದ್ದಿ
ದೆಹಲಿ: ಅಪಹರಣ ಪ್ರಕರಣದ ಅಪರಾಧಿ ಹಾಗೂ ಆತನ ಸಹೋದರನನ್ನು ಪೊಲೀಸ್ ಬೆಂಗಾವಲಿನಲ್ಲಿದ್ದಾಗಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಶನಿವಾರ ರಾತ್ರಿ ಪ್ರಯಾಗ್ ರಾಜ್ ನಲ್ಲಿ ನಡೆದಿದೆ. ಆತಿಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ನನ್ನು ತುಂಬಾ ಹತ್ತರದಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗಲೇ ಇಂತಹದೊಂದು ಘಟನೆ ನಡೆದಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಸೋಷಿಯಲ್ ಮೀಡಿಯಾ ಸೇರಿ ಎಲ್ಲೆಡೆ ವಿಡಿಯೋ ವೈರಲ್ ಆಗುತ್ತಿದೆ. ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ 20 ವರ್ಷಗಳಿಂದ ಆತಿಕ್ ಅಹ್ಮದ್ ಮೇಲೆ ಅಪಹರಣ, ಕೊಲೆ, ಸುಲುಗೆ ಸೇರಿ ಅನೇಕ ಕೇಸ್ ಗಳಿವೆ. ಈತ ಸೇರಿ ಇತರೆ ಇಬ್ಬರಿಗೆ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ಮಾರ್ಚ್ ನಲ್ಲಿ ವಿಧಿಸಿದೆ. ವೈದ್ಯಕೀಯ ತಪಾಸಣೆಗೆ ಹೋಗುವಾಗ ಮಾರ್ಗಮಧ್ಯ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಪೊಲೀಸರ ಗುಂಡಿಗೆ ಆತಿಕ್ ಅಹಮ್ಮದ್ ಮಗ ಬಲಿಯಾಗಿದ್ದ. ಪೊಲೀಸರಿಂದ ತನಿಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದ. ಈಗ ನೋಡಿದರೆ ಪೊಲೀಸರ ಎದುರೆ ಹತ್ಯೆಯಾಗಿ ಹೋಗಿದ್ದಾರೆ. ಹಂತಕರು ಪೊಲೀಸರ ಎದುರು ಗುಂಡು ಹಾರಿಸುತ್ತಿದ್ದರೂ ಅವರನ್ನು ತಡೆಯದೆ ಹೋಗಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.