ಇವತ್ತು ಯಾರೆಲ್ಲ ಯಾವ ಪಕ್ಷಕ್ಕೆ ಜಂಪ್ ಆಗ್ತಾರೆ?

154

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನಸಬಾ ಚುನಾವಣೆಗೆ ಟಿಕೆಟ್ ಸಿಗದೆ ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ನಡೆದಿದೆ. ದೊಡ್ಡ ದೊಡ್ಡ ನಾಯಕರುಗಳೆ ದಶಕಗಳಿಂದ ಇರುವ ಪಕ್ಷವನ್ನು ಬಿಟ್ಟು ಹೊರ ಬರುತ್ತಿದ್ದಾರೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನ. ಇವತ್ತು ಏಪ್ರಿಲ್ 17. ಹೀಗಾಗಿ ಉಳಿದಿರುವ 3 ದಿನಗಳಲ್ಲಿ ಬಾಕಿ ಉಳಿಸಿಕೊಂಡಿರುವ ಸ್ಥಾನಗಳಿಗೆ ಟಿಕೆಟ್ ಹಂಚಬೇಕು.

ಈಗಾಗ್ಲೇ ಟಿಕೆಟ್ ವಂಚಿತರು ಪ್ರತಿಯೊಂದು ಪಕ್ಷದಲ್ಲಿ ಬಂಡಾಯ ಎದಿದ್ದು ಯಾರೆಲ್ಲ ಯಾವ ಪಕ್ಷಕ್ಕೆ ಹೋಗುತ್ತಾರೆ ಅನ್ನೋ ಮತ್ತಷ್ಟು ಕುತೂಹಲ ಮೂಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸವದಿಯಂತೆ ಕಾಂಗ್ರೆಸ್ ಸೇರುವುದು ಪಕ್ಕಾ ಆಗಿದೆ. ಇಂದು ರಾಹುಲ್ ಗಾಂಧಿ ಸಮ್ಮುಖದಲ್ಲಿ ಶೆಟ್ಟರ್ ಕೈ ಪಡೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಬಿಜೆಪಿ ಸಂಸದ ಸಂಗಣ್ಣ ಕರಡಿ ಸಹ ಬಿಜೆಪಿಗೆ ರಾಜೀನಾಮೆ ಸಲ್ಲಿಸುತ್ತಿದ್ದು, ಜೆಡಿಎಸ್ ಸೇರಿ ವಿಧಾನಸಭಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಹೀಗೆ ಇನ್ನು ಯಾವೆಲ್ಲ ನಾಯಕರು ಹೊರ ಬಂದು ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!