ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು: ಕೊಲೆ ಪ್ರಕರಣವೊಂದರ ಆರೋಪಿ ರೌಡಿ ಶೀಟರ್ ನೊಬ್ಬನ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟಿದ್ದಾರೆ. ಬಳಿಕ ಆತನನ್ನ ಬಂಧಿಸಲಾಗಿದೆ. ರೌಡಿ ಶೀಟರ್ ಸಂತೋಷನನ್ನ ಪೊಲೀಸರು ಬಂಧಿಸಿದ್ದಾರೆ.
ಜನವರಿ 9ರಂದು ಶ್ರೀನಿವಾಸ ಅಲಿಯಾಸ್ ಕರಿ ಸೀನನ್ನ ಸಂತೋಷ ಕೊಲೆ ಮಾಡಿದ್ದ. ಈ ಪ್ರಕರಣದ ಪ್ರಮುಖ ಆರೋಪಿ ಸಂತೋಷ ಬಂಧನಕ್ಕೆ ರಾಜಗೋಪಾಲನಗರದ ಜಿಕೆ ಡಬ್ಲ್ಯೂ ಲೇಔಟ್ ಬಳಿ ಹೋದಾಗ ತಪ್ಪಿಸಿಕೊಳ್ಳಲು ನೋಡಿದ್ದಾನೆ. ಆಗ ಪಿಎಸ್ಐ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ.