ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಸ್ಟಿ ಮೀಸಲಾತಿಗಾಗಿ ಇತ್ತೀಚೆಗೆ ಕುರುಬ ಸಮುದಾಯದಿಂದ ನಡೆದ ಸಮಾವೇಶದಲ್ಲಿ ಸಚಿವರು ಭಾಗಿಯಾಗಿರುವುದಕ್ಕೆ ಸ್ವತಃ ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನ ಪ್ರಶ್ನಿಸಿದೆ.
ಮನವಿ ಸ್ವೀಕರಿಸಬೇಕಾದವರೆ ಮನವಿ ಕೊಟ್ಟರೆ ಹೇಗೆ ಎಂದು ಆಯುನೂರು ಮಂಜುನಾಥ ಪ್ರಶ್ನಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಯಾವುದೇ ಜಾತಿ ಪರವಾಗಿರದೆ, ರಾಗ-ದ್ವೇಷವಿಲ್ಲದೆ ಕಾರ್ಯನಿರ್ವಹಿಸುವುದಾಗಿ ಹೇಳಿದ ಬಳಿಕವೂ ಜಾತಿ ಸಮಾವೇಶದಲ್ಲಿ ಸಚಿವರೇ ಭಾಗಿಯಾಗಿದ್ರೆ ಅದು ಸಂವಿಧಾನ ವಿರೋಧಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಕಾಂಗ್ರೆಸ್, ನಿಮ್ಮವರೆ ನಿಮ್ಗೆ ಬುದ್ದಿ ಹೇಳ್ತಿದ್ದಾರೆ. ಇನ್ನಾದ್ರೂ ಜನರ ಹಾದಿ ತಪ್ಪಿಸುವುದನ್ನ ಬಿಡಿ ಎಂದಿದ್ದಾರೆ.