ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಜೊತೆಗೆ ಸಾಂಕೇತಿಕವಾಗಿ ಕೆಲ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಉಚಿತ ಬಸ್ಸಿನಲ್ಲಿ ಸಿಎಂ ಟಿಕೆಟ್ ವಿತರಣೆ ಮಾಡಲ್ಲ. ಅದಕ್ಕೆ ಕಂಡೆಕ್ಟರ್ ಇರ್ತಾರೆ. ಯೋಜನೆ ಉದ್ಘಾಟನೆ ಬಳಿಕ ಸಿಟಿಯಲ್ಲಿ ಒಂದು ರೌಂಡ್ ಹೋಗುತ್ತೇವೆ. ಇನ್ನು ಉಚಿತ ಬಸ್ ಪ್ರಯಾಣದ ಸ್ಮಾರ್ಟ್ ಕಾರ್ಡ್ ಪಡೆಯಲು 3 ತಿಂಗಳು ಕಾಲಾವಕಾಶ ಇರತ್ತೆ ಎಂದರು.