ಪ್ರಜಾಸ್ತ್ರ ಸುದ್ದಿ
ತುಮಕೂರು: ಉಚಿತ ಬಸ್ ಹತ್ತಲು ಬಂದ ಮಹಿಳೆ ಮೇಲೆ ಕೆಎಸ್ ಆರ್ ಟಿಸಿ ಬಸ್ ಚಾಲಕನೊಬ್ಬ ಬಸ್ ಹತ್ತಿಸಲು ಹೋದ ಆಘಾತಕಾರಿ ಘಟನೆ ಜಿಲ್ಲೆಯ ಕೊಟಗೆರೆಯ ನಾಗೇನಹಳ್ಳಿ ಗೇಟ್ ಹತ್ತಿರ ನಡೆದಿದೆ. ಬಸ್ ನಿಲ್ಲಿಸಲು ಕೈ ಅಡ್ಡ ಹಾಕಿದ ಮಹಿಳೆಯ ಮೇಲೆ ಬಸ್ ಹತ್ತಿಸಲು ಹೋಗಿದ್ದಾನೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯರು ದರ್ಶನ ಪಡೆದು ವಾಪಸ್ ಊರಿಗೆ ಹೋಗಲು ಬಸ್ಸಿಗೆ 2 ಗಂಟೆಗಳ ಕಾಲ ಕಾಯ್ದರೂ ಬಸ್ ಬಂದಿಲ್ಲ. ಹೀಗಾಗಿ ರಸ್ತೆ ಬದಿ ನಿಂತು ಕೈ ಅಡ್ಡ ಹಾಕಿದ ಮಹಿಳೆ ಮೇಲೆ ಬಸ್ ಹತ್ತಿಸಲು ಹೋಗಿದ್ದಾನೆ.
ಬಸ್ ಚಾಲಕನ ವರ್ತನೆ ಬಗ್ಗೆ ಸ್ಥಳೀಯರು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಮಹಿಳೆಯರಿಗೆ ಬೇರೆ ಬಸ್ ವ್ಯವಸ್ಥೆ ಮಾಡಿ ಕಳುಹಿಸಲಾಗಿದೆ. ಬಸ್ ಚಾಲಕನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.