ಗುಮ್ಮಟನಗರಿಯಲ್ಲಿ ಅಪ್ರಾಪ್ತೆ ಅಪಹರಣ?

141

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಅಪಹರಣಗೊಂಡಿದ್ದಾಳೆ ಅನ್ನೋ ಪ್ರಕರಣವೊಂದು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಾಂತಿ ನಗರದ ನಿವಾಸಿಯೊಬ್ಬರು ಮಗಳು ನಾಪತ್ತೆಯಾಗಿದ್ದಾಳೆ.

ಇಟ್ಟಂಗಿಹಾಳ ಹತ್ತಿರದ ಖಾಸಗಿ ಕಾಲೇಜುವೊಂದರಲ್ಲಿ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಓದುತ್ತಿದ್ದು, ಪ್ರತಿ ದಿನ ಮಧುವನ ಕ್ರಾಸ್ ಹತ್ತರ ಬಸ್ ಬರುತ್ತೆ. ಅಲ್ಲಿಂದ ಬರುವುದು, ಹೋಗುವುದು ಮಾಡುತ್ತಾಳೆ. ಆದರೆ, ಜೂನ್ 7ರಂದು ಕಾಲೇಜಿನ ಬಸ್ಸಿಗೆ ಹತ್ತಿದವಳು ಸಂಜೆಯಾದರೂ ಮನೆಗೆ ಬಂದಿಲ್ಲ.

ತಂದೆ ಮನೆಯಲ್ಲಿ ವಿಚಾರಿಸಿದರೆ ಮಗಳು ಬಂದಿಲ್ಲ. ಕಾಲೇಜಿಗೆ ಹೋಗಿ ಕೇಳಿದರೆ ವಿದ್ಯಾರ್ಥಿನಿ ಅಂದು ಕಾಲೇಜಿಗೆ ಬಂದಿಲ್ಲ. ಕಾಲೇಜು ಬಸ್ ಚಾಲಕನ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದು ಅಪಹರಣವೇ ಅಥವ ಬೇರೆ ಪ್ರಕರಣ ಏನಾದರೂ ಇರಬಹುದೇ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!