ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟಿ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಥಿಯವಾಡಿ ಚಿತ್ರದ ವಿರುದ್ಧ ಆರಂಭದ ದಿನದಿಂದಲೂ ಒಂದಲ್ಲ ಒಂದು ವಿರೋಧಗಳು ಕೇಳಿ ಬರುತ್ತಿವೆ. ಇದೀಗ ಬಾಂಬೆ ಹೈಕೋರ್ಟ್ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಫೆಬ್ರವರಿ 25ರಂದು ಚಿತ್ರ ರಿಲೀಸ್ ಆಗುತ್ತಿದೆ.
ಗಂಗೂಬಾಯಿ ಕಾಥಿಯವಾಡಿಯ ದತ್ತು ಪುತ್ರ ಹಾಗೂ ಕಾಂಗ್ರೆಸ್ ಶಾಸಕ ಮತ್ತು ಕಾಮಾಟಿಪುರ, ಕಾಥಿಯವಾಡಿಯ ಜನರು ಕೋರ್ಟ್ ಮೊರೆ ಹೋಗಿದ್ದರು. ಜನಾಂಗೀಯ ನಿಂದನೆ ಹಾಗೂ ಈ ಎರಡು ಸ್ಥಳಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ. ಇದರಿಂದ ಇಲ್ಲಿನ ವಾಸಿಸಲು ಆಗುವುದಿಲ್ಲ. ಆ ಹೆಸರುಗಳನ್ನು ತೆಗೆದು ಹಾಕಬೇಕೆಂದು ಕೋರ್ಟ್ ಮೊರೆ ಹೋಗಿದ್ದರು.
ಆದರೆ, ಕೋರ್ಟ್ ಅರ್ಜಿಯನ್ನು ಮಾನ್ಯ ಮಾಡಿಲ್ಲ. ಅರ್ಜಿದಾರರು ಕೋರ್ಟಿಗೆ ಬರುವ ಮುನ್ನ ಪರ್ಯಾಯ ಮಾರ್ಗಗಳ ಬಗ್ಗೆ ತಿಳಿಸಿಲ್ಲ. ಇದರಿಂದ ಯಾರಿಗಾದರೂ ಮಾನಸಿಕವಾಗಿ ತೊಂದರೆಯಾದರೆ ಸೂಕ್ತ ವೇದಿಕೆಯಲ್ಲಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದಿದೆ.