ಮೂಡಿಗೆರೆ: ಇಲ್ಲಿನ ಕಾಲೇಜು ವಿದ್ಯಾರ್ಥಿನಿಯೊಬ್ಬರು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಇದನ್ನ ಕೊಲೆ ಎಂದು ಶಂಕಿಸಲಾಗಿದೆ. ತಾಲೂಕಿನ ಬಸವನಹಳ್ಳಿಯ 19 ವರ್ಷದ ರಶ್ಮಿ ಸಾವನ್ನಪ್ಪಿದ ಯುವತಿ.
ವಿದ್ಯಾರ್ಥಿನಿ ರಶ್ಮಿ ಸಾವು ವ್ಯವಸ್ಥಿತಿ ಕೊಲೆಯೆಂದು ಹೆತ್ತವರು ಆರೋಪಿಸಿದ್ದಾರೆ. ಸ್ಥಳೀಯ ಆಟೋ ಚಾಲಕ ಚೇತನ ಎಂಬಾತ ರಶ್ಮಿಯನ್ನ ಪ್ರೀತಿ ಮಾಡ್ತಿದ್ದನಂತೆ. ಇದನ್ನು ಆಕೆ ನಿರಾಕರಿಸಿದ ಕಾರಣಕ್ಕೆ ಆಟೋದಿಂದ ತಳ್ಳಿ ಕೊಲೆ ಮಾಡಿದ್ದಾನೆ ಅಂತಾ ಹೇಳಲಾಗ್ತಿದೆ. ಈ ಬಗ್ಗೆ ಯುವತಿ ಪೋಷಕರು ದೂರು ನೀಡಿದ್ದಾರೆ.
ಮೂಡಿಗೆರೆಯ ಡಿಎಸ್ ಬಿಜಿ ಪದವಿ ಕಾಲೇಜಿನಲ್ಲಿ ರಶ್ಮಿ ದ್ವಿತೀಯ ವರ್ಷದ ಬಿ.ಕಾಂ ವ್ಯಾಸಂಗ ಮಾಡ್ತಿದ್ದಳು. ಮಂಗಳವಾರ ಸಂಜೆ ರಸ್ತೆ ಮಧ್ಯದಲ್ಲಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ಳು. ತಕ್ಷಣ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಅಷ್ಟರಲ್ಲಿಯೇ ಆಕೆ ಸಾವನ್ನಪ್ಪಿದ್ದಳು ಅಂತಾ ತಿಳಿದು ಬಂದಿದೆ. ಈ ಮೊದ್ಲು ತಲೆ ಸುತ್ತುಬಂದು ಬಿದ್ದು ಸಾವನ್ನಪ್ಪಿರಬಹುದು ಅಂತಾ ಹೇಳಲಾಗಿತ್ತು.
ಇದೀಗ ಮೃತ ರಶ್ಮಿಯ ಪೋಷಕರು ಇದೊಂದು ಪ್ರೀಪ್ಲಾನ್ ಮರ್ಡರ್ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು ಈ ಪ್ರಕರಣ ಹೊಸ ರೂಪ ಪಡೆದುಕೊಂಡಿದೆ.