ಪ್ರಜಾಸ್ತ್ರ ಸುದ್ದಿ
ಬಸವನಬಾಗೇವಾಡಿ: ಕುದರಿ ಸಾಲವಾಡಗಿ ಗ್ರಾಮದ ಕೊಂಡಗೂಳಿಯ ಜಮೀನಿನ ಭಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಬಾಲಕಿಯರಿಬ್ಬರ ಮೃತದೇಹ ಪ್ರಕರಣ ಸಂಬಂಧ, ಶಾಸಕ ಸೋಮನಗೌಡ ಪಾಟೀಲ ಸಾಸೂನರ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿದ್ರು.
ಪ್ರೀತಿ ಕಳ್ಳಿಮನಿ ಹಾಗೂ ರೇಣುಕಾ ಕಳ್ಳಿಮನಿ ಕುಟುಂಬಸ್ಥರಿಗೆ ಭೇಟಿಯಾಗಿ ಸಾಂತ್ವಾನ ಹೇಳಿದ್ರು. ಈ ವೇಳೆ ಶಿವರಾಜ ಕಳ್ಳಿಮನಿ ಹಾಗೂ ಗೌರವ್ವ ಕಳ್ಳಿಮನಿ ಅವರಿಗೆ ತಲಾ 4,12,500 ರೂಪಾಯಿಗಳನ್ನ ನೀಡಿದ್ರು. ಸರ್ಕಾರದ ನಿಯಮಾನುಸಾರ ಕೊಡಬೇಕಾದ ಪರಿಹಾರದ ಶೇಕಡ 50ರಷ್ಟು ಪರಿಹಾರವನ್ನ, ಜಿಲ್ಲಾಡಳಿತದ ಮೂಲಕ ಶಾಸಕರು ವಿತರಿಸಿದ್ರು.
ಬಾಲಕಿಯರ ಸಾವಿನ ಪ್ರಕರಣ ಸಂಬಂಧ ಜಿಲ್ಲೆಯಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದೊಂದು ಹತ್ಯಾಚಾರವಾಗಿದ್ದು, ತಪ್ಪಿತಸ್ಥರನ್ನ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ವಿವಿಧ ದಲಿತಪರ ಸಂಘಟನೆಗಳು ಒತ್ತಾಯಿಸಿವೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಾಲ್ಲೂಕು ದಂಡಾದಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಹಾಜರಿದ್ರು.