ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ಕಾಲುವೆಗೆ ಜಾರಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ನಡೆದಿದೆ. ಗುರುಸಿದ್ದಪ್ಪ ಹಡಪದ(೪೦) ಮೃತ ದುರ್ದೈವಿ.
ಸಾತಿಹಾಳ ತಾಂಡಾ ಹತ್ತಿರವಿರುವ ಮುಖ್ಯ ಕಾಲುವೆಯಲ್ಲಿ ಬಟ್ಟೆ ತೊಳೆಯುವಾಗ, ಚಾಪಿ ಹರಿದುಕೊಂಡು ಹೋಗುವುದನ್ನು ನೋಡಿ ಹಿಡಿಯಲು ಯತ್ನಿಸುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ. ಸಿಂದಗಿಯ ಅಗ್ನಿಶಾಮಕ ಠಾಣೆಯ ಅಧಿಕಾರಿ ಶಿವಕುಮಾರ ಬಾಗೇವಾಡಿ, ಎಲ್.ಎಫ್ ಹನುಮಂತ, ಎಸ್.ಪಿ ಗುಗ್ಗರಿ, ರಾಜು ರಾಠೋಡ, ಹನುಮಂತ ಕುಂಬಾರ, ಎಸ್.ಎಸ್ ಬಾಗೇವಾಡಿ, ಸಿದ್ದಣ್ಣ ರೂಡಗಿ, ಮುತ್ತುರಾಜ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆದರು. ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.