ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ರಾಜ್ಯದ ಗ್ರಾಮ ಪಂಚಾಯ್ತಿ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 7ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದೆ. ಹೀಗಾಗಿ ಚುನಾವಣೆ ಆಯೋಗ ಸಕಲ ರೀತಿ ಸಿದ್ಧತೆ ಮಾಡಿ ಅಧಿಕಾರಿಗಳನ್ನ ನೇಮಕ ಮಾಡಿದೆ.
ಆದ್ರೆ, ಇಲ್ಲೊಬ್ಬ ಅಧಿಕಾರಿ ಮತಗಟ್ಟೆಗೆ ಲೋಡೆಡ್ ಗನ್ ಹಿಡಿದುಕೊಂಡು ಬಂದಿದ್ದಾನೆ. ಬೆಳಗಾವಿ ತಾಲೂಕಿನ ದೇಸೂರ ಗ್ರಾಮದ ಪಿಆರ್ ಓ ಆಗಿ ನಿಯೋಜನೆಗೊಂಡಿದ್ದ ಅಧಿಕಾರಿಯೊಬ್ಬ ಲೋಡೆಡ್ ಗನ್ ತೆಗೆದುಕೊಂಡು ಬಂದಿದ್ದ. ಚುನಾವಣಾ ಸಿಬ್ಬಂದಿಯ ಮೂಲಕ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಲೈಸನ್ಸ್ ಇರುವ ಗನ್ ತೆಗೆದುಕೊಂಡು ಬಂದ ಅಧಿಕಾರಿಯನ್ನ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿದೆ. ಅಲ್ದೇ, ಚುನಾವಣೆ ಅಧಿಕಾರಿಗೆ ಮಾಹಿತಿ ನೀಡಿ ಪಿಆರ್ ಓ ಬದಲಾವಣೆ ಮಾಡಲಾಗಿದೆ.