ಬ್ರೇಕಿಂಗ್ ನ್ಯೂಸ್: ವಿಜಯಪುರದಲ್ಲಿ ವೃದ್ಧನ ಭೀಕರ ಹತ್ಯೆ

363

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಗುಮಟ್ಟನಗರಿಯಲ್ಲಿ ಸೋಮವಾರ ಮಧ್ಯಾಹ್ನ ವೃದ್ಧನೊಬ್ಬನನ್ನ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. 68 ವರ್ಷದ ವಿನಯ ನಾಯಕ ಅನ್ನೋ ವೃದ್ಧನ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ.

ನಗರದ ಮೀನಾಕ್ಷಿ ಚೌಕ್ ಹತ್ತಿರದ ಗುಡ್ಡೊಡಗಿ ಪಾರ್ಮ್ ಹೌಸ್ ಬಳಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಸುಮಾರು ಮೂರು ಜನ ಕಳ್ಳರು ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ವೃದ್ಧನನ್ನ ಹತ್ಯೆ ಮಾಡಿ ಹೊರಗಡೆಯಿಂದ ಮನೆಯ ಬೀಗ ಹಾಕಿಕೊಂಡು ಹೋಗಿದ್ದಾರೆ.

ಹತ್ಯೆಯಾದ ವೃದ್ಧನ ಹೆಂಡ್ತಿ ಹಾಗೂ ಮಕ್ಕಳು ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಸ್ಪಿ ಅನುಪಮ ಅಗರ್ವಾಲ್, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು ತಪಾಸಣೆ ನಡೆಸಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರು ಈ ಕೃತ್ಯವೆಸಗಿದ್ದಾ? ಅಥವ ಬೇರೆ ಯಾರಾದ್ರೂ ಈ ಕೃತ್ಯವೆಸಗಿದ್ದಾ ಅನ್ನೋ ಪ್ರಶ್ನೆ ಮೂಡಿದ್ದು, ನಿಗೂಢ ಹತ್ಯೆಯ ಸತ್ಯ ತನಿಖೆಯಿಂದ ಬಯಲಾಗಬೇಕಿದೆ.




Leave a Reply

Your email address will not be published. Required fields are marked *

error: Content is protected !!