ಸಿಂದಗಿ: ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮ ಪಂಚಾಯ್ತಿ ಸಭೆ ಇಂದು ನಡೆಯಿತು. ಆದ್ರೆ, ಗ್ರಾಮ ಪಂಚಾಯ್ತಿ ಇರುವ ಗಬಸಾವಳಗಿಯಲ್ಲಿ ಸಭೆ ಮಾಡೋದು ಬಿಟ್ಟು ಬೇರೆ ಹಳ್ಳಿಯಲ್ಲಿ ಮಾಡಿರೋದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಗಬಸಾವಳಗಿ ಗ್ರಾಮದ ಜನರನ್ನ, ಗ್ರಾಮಪಂಚಾಯ್ತಿ ಸದಸ್ಯರನ್ನ ಕಡೆಗಣಿಸಿ ಸಭೆ ನಡೆಸಿರೋದಕ್ಕೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಗ್ರಾಮ ಪಂಚಾಯ್ತಿ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಳ್ಳಲಾಯ್ತು.
ಗ್ರಾಮದ ಮುಖಂಡ ಅಯ್ಯನಗೌಡ ಪಾಟೀಲ ಮಾತನಾಡಿ, ಅಭಿವೃದ್ದಿಅಧಿಕಾರಿಗಳಾದ ಹಡಗಲಿಯವರು ತಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಡಂಗುರ ಹೊಡೆಯದೆ ಮತ್ತು ಜನರಿಗೆ ತಿಳಿಸದೆ ಸಭೆ ಮಾಡ್ತಿರುವುದಕ್ಕೆ ತೆಗೆದುಕೊಳ್ಳಲಾಯ್ತು. ಇಷ್ಟೆಲ್ಲಾ ಆಕ್ರೋಶ ವ್ಯಕ್ತವಾದ ಮೇಲೆ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು ಅಂತಾ ತಿಳಿಸಿದ್ದಾರೆ.